ಮಂಗಳೂರಿನ ಅಗ್ನಿಶಾಮಕ ಅಧಿಕಾರಿ ಸೇರಿ ನಾಲ್ವರಿಗೆ ರಾಷ್ಟ್ರಪತಿ ಪದಕ
ಟಿ.ಎನ್. ಶಿವಶಂಕರ್
ಬೆಂಗಳೂರು, ಆ.14: ಸ್ವಾತಂತ್ರೋತ್ಸವ ಅಂಗವಾಗಿ ರಾಜ್ಯದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ನಾಲ್ವರಿಗೆ 2019ನೆ ಸಾಲಿನ ರಾಷ್ಟ್ರಪತಿ ಪದಕ ಲಭಿಸಿದೆ.
ಮಂಗಳೂರು ವಲಯದ ಮುಖ್ಯ ಅಗ್ನಿಶಾಮಕ ಅಧಿಕಾರಿ ಟಿ.ಎನ್. ಶಿವಶಂಕರ್ ಹಾಗೂ ಬನ್ನೇರುಘಟ್ಟ ರಸ್ತೆಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಅಕಾಡೆಮಿಯ ಕಮಾಂಡೆಂಟ್ ಆಗಿರುವ ಮುಖ್ಯ ಅಗ್ನಿಶಾಮಕ ಅಧಿಕಾರಿ ಬಿ.ಎನ್.ಮಂಜುನಾಥ ಅವರು ವಿಶಿಷ್ಟ ಸೇವಾ ಪದಕಕ್ಕೆ ಪಾತ್ರರಾಗಿದ್ದಾರೆ.
ಅದೇ ರೀತಿ, ಶ್ಲಾಘನೀಯ ಸೇವೆಗಾಗಿ ನಾಗರಬಾವಿ ಅಗ್ನಿಶಾಮಕ ಠಾಣೆ ಅಧಿಕಾರಿ ಆರ್.ಟಿ.ನಂಜೇಗೌಡ ಹಾಗೂ ಅಂಕೋಲಾದ ಅಗ್ನಿಶಾಮಕ ವಾಹನ ಚಾಲಕ ತಿಪ್ಪಣ್ಣ ವಿ.ನಾಯಕ್ ಅವರಿಗೆ ಪದಕ ಸಿಕ್ಕಿದೆ ಎಂದು ಪ್ರಕಟನೆ ತಿಳಿಸಿದೆ.
Next Story