ಹನೂರು: ಮಹಿಳೆ ನೇಣಿಗೆ ಶರಣು
ಹನೂರು, ಆ.21: ಮಾನಸಿಕ ನೆಮ್ಮದಿ ಕಳೆದುಕೊಂಡ ಮಹಿಳೆ ನೇಣಿಗೆ ಶರಣಾಗಿರುವ ಘಟನೆ ಮಲೆ ಮಹದೇಶ್ವರ ಬೆಟ್ಟದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ರಂಗೂಪೂರ ಗ್ರಾಮದ ಗೌರಮ್ಮ (51) ನೇಣಿಗೆ ಶರಣಾಗದ ಮಹಿಳೆ ಎಂದು ಗುರುತಿಸಲಾಗಿದೆ. ಗೌರಮ್ಮ ಗುಂಡ್ಲುಪೇಟೆಯಿಂದ ಕಳೆದೆರಡು ದಿನಗಳ ಹಿಂದೆ ಗಂಡನಿಂದ ಮುನಿಸಿಕೊಂಡು ತೆರಳಿದ್ದರು ಎನ್ನಲಾಗಿದೆ. ಇಂದು ಮಲೈಮಹದೇಶ್ವರ ಬೆಟ್ಟದ ಯಾತ್ರಿ ನಿವಾಸದ ಹಿಂಭಾಗವಿರುವ ಕಾಡಿನಲ್ಲಿ ಮರಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಸ್ಥಳಕ್ಕೆ ಮಲೈಮಹದೇಶ್ವರ ಬೆಟ್ಟದ ಸರ್ಕಲ್ ಇನ್ಸ್ ಪೆಕ್ಟರ್ ಮಹೇಶ್ ಭೇಟಿ ನೀಡಿ ಸ್ಥಳ ಪರಿಶೀಲಿಸಿ, ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ
Next Story