ಸಜ್ಜಾ ಕುಸಿದು ಇಬ್ಬರು ಮೃತ್ಯು ಪ್ರಕರಣ: ತಲಾ ಐದು ಲಕ್ಷ ರೂ. ಪರಿಹಾರ ಘೋಷಣೆ
ಬಳ್ಳಾರಿ, ಆ. 23: ಸಿರುಗುಪ್ಪ ಪಟ್ಟಣದಲ್ಲಿ ಕ್ರೀಡಾಂಗಣದ ಮೇಲ್ಛಾವಣಿ ಕುಸಿದು ಇಬ್ಬರು ಮೃತಪಟ್ಟ ಘಟನೆ ಸಂಬಂಧ ಮೃತರ ಕುಟುಂಬಸ್ಥರಿಗೆ ತಲಾ ಐದು ಲಕ್ಷ ರೂ. ಹಾಗೂ ಗಾಯಗೊಂಡವರಿಗೆ 25 ಸಾವಿರ ಪರಿಹಾರವನ್ನು ಸಚಿವ ಶ್ರೀರಾಮುಲು ಘೋಷಣೆ ಮಾಡಿದರು.
ಶಿಥಿಲಗೊಂಡಿರುವ ಕ್ರೀಡಾಂಗಣದ ಕಟ್ಟಡ ನೆಲಸಮ ಮಾಡಲು ಜಿಲ್ಲಾಧಿಕಾರಿ ನಕುಲ್ ಅದೇಶಿಸಿದ್ದು, ಘಟನೆ ಸ್ಥಳಕ್ಕೆ ಸಚಿವ ಶ್ರೀರಾಮುಲು, ಶಾಸಕ ಸೋಮಲಿಂಗಪ್ಪ, ಎಸ್ಪಿ ಸಿ.ಕೆ. ಬಾಬಾ, ಜಿಲ್ಲಾ ಕ್ರಿಡಾಧಿಕಾರಿ ರಾಥೋಡ್ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿದರು.
Next Story