ಎ.ಕೆ.ಸುಬ್ಬಯ್ಯ ನಿಧನಕ್ಕೆ ಎಸ್ಡಿಪಿಐ ಸಂತಾಪ
ಬೆಂಗಳೂರು, ಆ.27: ಸಾಮಾಜಿಕ ಹೋರಾಟಗಾರ, ಹಿರಿಯ ರಾಜಕಾರಣಿ ಎ.ಕೆ.ಸುಬ್ಬಯ್ಯರ ನಿಧನಕ್ಕೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್ಡಿಪಿಐ) ಸಂತಾಪ ಸೂಚಿಸಿದ್ದು, ಅವರ ನಿಧನ ರಾಜ್ಯದ ಚಿಂತನಾ ಹಾಗೂ ಹೋರಾಟ ಕ್ಷೇತ್ರಕ್ಕೆ ದೊಡ್ಡ ನಷ್ಟವನ್ನುಂಟು ಮಾಡಿದೆ ಎಂದು ಹೇಳಿದೆ.
ಸುಬ್ಬಯ್ಯ ಅವರು ಪ್ರಾರಂಭದಲ್ಲಿ ಬಲಪಂಥೀಯರೊಂದಿಗೆ ಗುರುತಿಸಿಕೊಂಡಿದ್ದರೂ ಅಲ್ಲಿನ ವಿಭಜನವಾದ ತೀವ್ರಗಾಮಿ, ಕೋಮುವಾದದಿಂದ ಬೇಸತ್ತು ಹೊರಬಂದು, ಸಾಮಾಜಿಕ ಚಳವಳಿಗಳಲ್ಲಿ ತೊಡಗಿಸಿಕೊಂಡಿದ್ದರು. ಬಲಪಂಥದ ವಿರುದ್ಧ, ಕೋಮುವಾದದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದವರಾಗಿದ್ದರು ಎಂದು ಎಸ್ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story