ಲಂಚ ಸ್ವಿಕರಿಸುವ ವೇಳೆ ಎಸಿಬಿ ಬಲೆಗೆ ಬಿದ್ದ ಗೃಹರಕ್ಷಕ ದಳದ ಕಮಾಂಡೆಂಟ್
ಮೈಸೂರು,ಆ.28: ಲಂಚ ಸ್ವೀಕರಿಸುವ ವೇಳೆ ಗೃಹರಕ್ಷಕ ದಳದ ಕಮಾಂಡೆಂಟ್ ಎಸಿಬಿ ಬಲೆಗೆ ಬಿದ್ದಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಹೆಚ್.ಎಸ್.ಕುಮಾರ್ ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಅಧಿಕಾರಿ. ಗೃಹರಕ್ಷಕರನ್ನು ಕರ್ತವ್ಯಕ್ಕೆ ನಿಯೋಜಿಸಲು ಕೆ.ಆರ್.ನಗರದ ಈರಣ್ಣೇಗೌಡ ಎಂಬವವರಿಗೆ ಕುಮಾರ್ ಲಂಚಕ್ಕೆ ಒತ್ತಾಯಿಸಿದ್ದರು. ಈ ನಡುವೆ ಈರಣ್ಣೇಗೌಡರಿಂದ ಲಂಚ ಪಡೆಯುವ ವೇಳೆ ಅಧಿಕಾರಿ ಕುಮಾರ್ ಎಸಿಬಿ ಬಲೆಗೆ ಬಿದ್ದಿದ್ದಾರೆ.
3 ಸಾವಿರ ರೂ ಲಂಚದ ಹಣದ ಸಮೇತ ಸಿಕ್ಕಿಬಿದ್ದಿದ್ದು, ಮೈಸೂರಿನ ಎಸಿಬಿ ಪೊಲೀಸರು ಅಧಿಕಾರಿ ಕುಮಾರ್ ನನ್ನು ಬಂಧಿಸಿದ್ದಾರೆ.
Next Story