ಮಡಿಕೇರಿ: ಅಡಿಕೆ ಕಳವಿಗೆ ಯತ್ನಿಸಿದ ಆರೋಪಿಗೆ ಗುಂಡೇಟು; ಸ್ಥಳದಲ್ಲೇ ಮೃತ್ಯು
ಮಡಿಕೇರಿ, ಆ.30: ಅಡಿಕೆ ಕಳವಿಗೆ ಯತ್ನಿಸಿದನೆನ್ನಲಾದ ಆರೋಪದಲ್ಲಿ ವ್ಯಕ್ತಿಯೋರ್ವನಿಗೆ ಮನೆ ಮಾಲಕ ಗುಂಡಿಕ್ಕಿದ್ದರಿಂದ ಆರೋಪಿ ಸ್ಥಳದಲ್ಲೇ ಮೃತಪಟ್ಟ ಘಟನೆ ಕೊಡಗು ಜಿಲ್ಲೆಯ ಕರಿಕೆಯಲ್ಲಿ ಗುರುವಾರ ತಡರಾತ್ರಿ ನಡೆದಿದೆ.
ಕರಿಕೆ ನಿವಾಸಿ ದೇವಂಗೋಡಿ ಗಣೇಶ್ ಗುಂಡೇಟಿಗೆ ಬಲಿಯಾದ ವ್ಯಕ್ತಿ.
ಈತ ನಿನ್ನೆ ರಾತ್ರಿ ಮಂದೋಡಿ ಹೊನ್ನಪ್ಪ ಎಂಬಾತನ ಮನೆಯಿಂದ ಅಡಿಕೆ ಕಳವಿಗೆ ಯತ್ನಿಸಿದಾಗ ಮನೆ ಮಾಲಕ ಗುಂಡು ಹಾರಿಸಿದ್ದಾರೆ. ಗುಂಡು ತಗುಲಿ ಗಂಭೀರ ಗಾಯಗೊಂಡ ಗಣೇಶ್ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಮಂದೋಡಿ ಹೊನ್ನಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೇಟಿ ನೀಡಿದ್ದಾರೆ. ಭಾಗಮಂಡಲ ಪೊಲೀಸರು ಪ್ರಕರಣದ ತನಿಖೆ ಮುಂದುವರಿಸಿದ್ದಾರೆ.
Next Story