ಹೈಕೋರ್ಟ್ಗೆ ನಾಲ್ವರು ಹೊಸ ನ್ಯಾಯಮೂರ್ತಿಗಳ ನೇಮಕ
ಬೆಂಗಳೂರು, ಅ.4: ಕೋಲಿಜಿಯಂ ಶಿಫಾರಸ್ಸು ಮೇರೆಗೆ ಕೇಂದ್ರ ಸರಕಾರ ಕರ್ನಾಟಕ ಹೈಕೋರ್ಟ್ಗೆ ಸವನೂರ್ ವಿಶ್ವಜಿತ್ ಶೆಟ್ಟಿ, ಮರಲೂರು ಇಂದ್ರಕುಮಾರ್, ಮುಹಮ್ಮದ್ ಗೌಸ್ ಶುಕುರೆ ಕಮಲ್, ಎಂಗಲಗುಪ್ಪೆ ಸೀತರಾಮಯ್ಯ ಇಂದಿರೇಶ್ ಅವರನ್ನು ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಿದೆ.
ನ್ಯಾಯಮೂರ್ತಿಗಳಾಗಿ ನೇಮಕಗೊಂಡಿರುವ ಈ ನಾಲ್ವರು ನ್ಯಾಯಮೂರ್ತಿಗಳು ಹೈಕೋರ್ಟ್ನಲ್ಲಿ ಹಲವು ವರ್ಷಗಳ ಕಾಲ ವಕೀಲರಾಗಿ ಸೇವೆ ಸಲ್ಲಿಸಿದ್ದಾರೆ. ಈಗಾಗಲೇ ಹೈಕೋರ್ಟ್ಗೆ 8 ನ್ಯಾಯಮೂರ್ತಿಗಳ ನೇಮಕಕ್ಕೆ ಕೇಂದ್ರ ಸರಕಾರ ಆದೇಶ ಹೊರಡಿಸಿದೆ. ಈ ನಾಲ್ವರು ನ್ಯಾಯಮೂರ್ತಿಗಳು ಸೇರಿ ಒಟ್ಟು 12 ನ್ಯಾಯಮೂರ್ತಿಗಳನ್ನು ನೇಮಕಗೊಳಿಸಿದಂತಾಗಿದೆ.
Next Story