ಡಿಕೆಶಿಯ ನಾಲ್ವರು ಆಪ್ತರನ್ನು ಬಂಧಿಸದಂತೆ ಹೈಕೋರ್ಟ್ ಆದೇಶ
ಬೆಂಗಳೂರು, ಅ.15: ಹೊಸದಿಲ್ಲಿ ನಿವಾಸಗಳ ಮೇಲಿನ ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಕೆಶಿಯ ನಾಲ್ವರು ಆಪ್ತರನ್ನು ಒಂದು ವಾರಗಳ ಕಾಲ ಬಂಧಿಸದಂತೆ ಜಾರಿ ನಿರ್ದೇಶನಾಲಯ(ಈಡಿ)ಕ್ಕೆ ಹೈಕೋರ್ಟ್ ಆದೇಶ ನೀಡಿದೆ.
ಸುಪ್ರೀಂಕೋರ್ಟ್ ರಜೆ ಇರುವ ಕಾರಣ ಮೇಲ್ಮನವಿ ಸಲ್ಲಿಸಲು ಆಗಿಲ್ಲ. ಅಲ್ಲದೆ, ಈಡಿ ಅವರು ವಿಚಾರಣೆಗೆ ಹಾಜರಾಗುವಂತೆ ಈಗಾಗಲೇ ನೋಟಿಸ್ ಜಾರಿಗೊಳಿಸಿದ್ದಾರೆ ಎಂದು ಸಚಿನ್ ನಾರಾಯಣ್, ಆಂಜನೇಯ, ಸುನೀಲ್ ಶರ್ಮಾ, ರಾಜೇಂದ್ರ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ನ್ಯಾಯಪೀಠವು ಈಡಿ ಅವರಿಗೆ ಡಿಕೆಶಿಯ ನಾಲ್ವರು ಆಪ್ತರನ್ನು ಒಂದು ವಾರ ಬಂಧಿಸಬಾರದು ಎಂದು ಆದೇಶ ಹೊರಡಿಸಿತು.
ಈ ಹಿಂದೆ ಡಿಕೆಶಿಯ ನಾಲ್ವರು ಆಪ್ತರಿಗೆ ಹೈಕೋರ್ಟ್ ವಿಭಾಗೀಯ ನ್ಯಾಯಪೀಠವು ನಾಲ್ಕು ವಾರ ಮಧ್ಯಂತರ ರಕ್ಷಣೆ ನೀಡಿ, ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ಅವಕಾಶ ಕಲ್ಪಿಸಿತ್ತು. ಈಗ ಮತ್ತೆ ಒಂದು ವಾರಗಳ ಕಾಲ ಬಂಧಿಸದಂತೆ ಆದೇಶ ನೀಡಿದೆ.
Next Story