ಮೈಸೂರು: ಕೇರಳದಿಂದ ಬರುತಿದ್ದ ಕಾರನ್ನು ತಡೆದು ದರೋಡೆ
ಮೈಸೂರು,ಅ.17: ಕೇರಳದಿಂದ ಬರುತ್ತಿದ್ದ ಕಾರೊಂದನ್ನು ತಡೆದು ಕಾರಿನಲ್ಲಿದ್ದವರ ಬಳಿಯಿದ್ದ ಎಂಟು ಲಕ್ಷರೂ.ಹಣವನ್ನು ದರೋಡೆಗೈದ ಘಟನೆ ನಂಜನಗೂಡು ಸೇತುವೆ ಸಮೀಪ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಕಾರಿನಲ್ಲಿ ಅಬ್ದುಲ್ ಜಲೀಲ್ ಮತ್ತು ಹ್ಯಾರೀಸ್ ಎಂಬವರಿದ್ದು, ಇವರು ಮೈಸೂರಿನಲ್ಲಿ ಎಲೆಕ್ಟ್ರಿಕಲ್ ಸಾಮಾನುಗಳನ್ನು ಖರೀದಿಸಲೆಂದು ಕೇರಳದ ಕಲ್ಲಿಕೋಟೆ ಜಿಲ್ಲೆಯ ನೆರೂಕೂಟ್ ಪೊಯಿಲ್ ಗ್ರಾಮದಿಂದ ಅ.14ರಂದು ಸಂಜೆ 7.30ರ ಸುಮಾರಿಗೆ ಬರುತ್ತಿದ್ದರು. ಈ ವೇಳೆ ನಂಜನಗೂಡು ಸೇತುವೆ ಬಳಿ ಅಡ್ಡಗಟ್ಟಿದ ಏಳುಮಂದಿಯಿದ್ದ ದರೋಡೆಕೋರರ ತಂಡ ಈ ಕೃತ್ಯವೆಸಗಿದೆ ಎಂದು ಪೊಲೀಸರು ತಿಳಿಸಿದ್ದು, ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story