ಹಾಸನ: ಅಪರ ಜಿಲ್ಲಾಧಿಕಾರಿಯಾಗಿ ಕವಿತಾ ರಾಜಾರಾಂ ಅಧಿಕಾರ ಸ್ವೀಕಾರ
ಹಾಸನ: ಅಪರ ಜಿಲ್ಲಾಧಿಕಾರಿ ಯಾಗಿ ಸಕಲೇಶಪುರ ಉಪ ವಿಭಾಗಾಧಿಕಾರಿಯಾಗಿದ್ದ ಕವಿತಾ ರಾಜಾರಾಂ ಅವರನ್ನು ನೇಮಿಸಿ ಸರಕಾರ ಆದೇಶ ಹೊರಡಿಸಿದೆ.
ಆದೇಶದ ಪ್ರಕಾರ ಕವಿತಾ ರಾಜಾರಾಂ ಅಪರ ಜಿಲ್ಲಾಧಿಕಾರಿ ಯಾಗಿ ಅಧಿಕಾರ ಸ್ವೀಕರಿಸಿದರು.
ಜಿಲ್ಲಾಧಿಕಾರಿಯಾಗಿದ್ದ ವೈಶಾಲಿ ಅವರ ವರ್ಗಾವಣೆ ನಂತರ ಖಾಲಿ ಇದ್ದ ಅಪರ ಜಿಲ್ಲಾಧಿಕಾರಿ ಸ್ಥಾನಕ್ಕೆ ಹಾಸನ ಎ.ಸಿ ನಾಗರಾಜ್ ಅವರನ್ನು ಹೆಚ್ಚುವರಿಯಾಗಿ ನೇಮಿಸಲಾಗಿತ್ತು. ಇತ್ತೀಚೆಗೆ ನಾಗರಾಜ್ ವರ್ಗಾವಣೆಗೊಂಡ ನಂತರ ಸಕಲೇಶಪುರ ಎ.ಸಿ ಯಾಗಿದ್ದು ಕವಿತಾ ರಾಜಾರಾಂ ಅವರನ್ನು ಅಪರ ಜಿಲ್ಲಾಧಿಕಾರಿಯಾಗಿ ಸರಕಾರ ನೇಮಿಸಿದೆ.
Next Story