ಜೈಲಿನಿಂದ ಬಂದ ಡಿಕೆಶಿಗೆ ಸಿಬಿಐ ಕಾಯುತ್ತಿದೆ: ಕೆ.ಎಸ್.ಈಶ್ವರಪ್ಪ
ದಾವಣಗೆರೆ, ಅ.25: ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಜಾಮೀನು ಮೇಲೆ ಹೊರಬಂದಿದ್ದಾರೆ. ಆದರೆ, ಅವರಿಗಾಗಿ ಸಿಬಿಐ ಕಾಯುತ್ತಿದೆ ಎಂದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ರವಿವಾರ ದಾವಣಗೆರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಜೈಲಿಗೆ ಏಕೆ ಹೋದರು ಎಂಬುದು ಬಹಿರಂಗವಾಗಬೇಕಿದೆ. ಜೈಲಿನಿಂದ ಬಂದ ನಂತರ ವಿಜಯೋತ್ಸವ ನೋಡಿ ಆಶ್ವರ್ಯವಾಗುತ್ತೆ. ಅಲ್ಲದೆ, ಕಾಂಗ್ರೆಸ್ ತಲೆ ತಗ್ಗಿಸಬೇಕಿತ್ತು. ಆದರೆ, ವಿಜಯೋತ್ಸವ ಮಾಡಿದೆ. ಅವರು ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಸಿಬಿಐ ಸಹ ಕಾಯುತ್ತಿದೆ ಎಂದು ತಿಳಿಸಿದರು.
ಕಾಂಗ್ರೆಸ್ ದಿವಾಳಿಯಾಗಿದೆ. ನಾನು ತಪ್ಪು ಮಾಡಿಲ್ಲ ಎಂದು ಹೇಳುವುದು ಇವರಲ್ಲ, ಬದಲಾಗಿ ಸಿಬಿಐ, ಈಡಿ ಹೇಳಬೇಕು. ಇಂತಹ ಸ್ಥಿತಿ ಯಾರಿಗೂ ಬರಬಾರದು. ಅವರ ತಾಯಿ, ಮಗಳು ಕಣ್ಣೀರು ಹಾಕಿದ್ದಕ್ಕೆ ನೋವಿದೆ ಎಂದು ತಿಳಿಸಿದರು.
Next Story