ಲಾರಿಗಳ ನಡುವೆ ಅಪಘಾತ: ಕ್ಲೀನರ್ ಮೃತ್ಯು
ದಾವಣಗೆರೆ,ಅ.29: ಜಗಳೂರು ತಾಲೂಕಿನ ಕಾನನಕಟ್ಟೆ ಗ್ರಾಮದ ಡಾಬಾದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಗಳ ನಡುವೆ ಪರಸ್ಪರ ಢಿಕ್ಕಿ ಸಂಭವಿಸಿ ಕ್ಲೀನರ್ ಮೃತಪಟ್ಟ ಘಟನೆ ನಡೆದಿದೆ.
ಸಿಬಾಮ್ ಮೃತಪಟ್ಟವರು. ಚೆನ್ನೈ ನಗರದಿಂದ ಕಾರುಗಳನ್ನು ಲೋಡ್ ಮಾಡಿಕೊಂಡು ಬೆಂಗಳೂರಿಗೆ ಬಂದು ಅಲ್ಲಿಂದ ಎನ್.ಎಚ್ 4 ಮಾರ್ಗವಾಗಿ ಚಿತ್ರದುರ್ಗಕ್ಕೆ ಬಂದು ಚಿತ್ರದುರ್ಗದಿಂದ ಎನ್.ಎಚ್-50 ಮಾರ್ಗವಾಗಿ ಹೊಸಪೇಟೆ ಕಡೆಗೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಜಗಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story