ನನ್ನಲ್ಲಿ ಕಾಂಗ್ರೆಸ್ ಮೇಲಿನ ಅಭಿಮಾನ ಜೀವಂತ ಎಂದ ಅನರ್ಹ ಶಾಸಕ
ಬೆಳಗಾವಿ, ನ.17: ರಾಜಕೀಯವಾಗಿ ಕಾಂಗ್ರೆಸ್ ಪಕ್ಷದ ಮೇಲಿನ ಅಭಿಮಾನ ಇಂದಿಗೂ ಸಹ ಜೀವಂತವಾಗಿದೆ ಎಂದು ಅನರ್ಹ ಶಾಸಕ, ಅಥಣಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಜೊತೆಗೆ ಬಂದಿರುವ ನಾವು 17 ಶಾಸಕರೂ ಬಿಜೆಪಿ ತೆಗೆದುಕೊಳ್ಳುವ ನಿರ್ಣಯಕ್ಕೆ ಬದ್ಧರಾಗಿದ್ದು, ಬಿಜೆಪಿ ಪರ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಅವರು ಮೂರು ಬಾರಿ ಶಾಸಕರಾದವರು, ಹಿರಿಯರು, ಸಚಿವರೂ ಆದವರು. ಈಗ ಅವರ ಮಾರ್ಗದರ್ಶನದಲ್ಲಿ ನಾವು ಚುನಾವಣೆ ಎದುರಿಸುತ್ತೇವೆ ಎಂದು ನುಡಿದರು.
ಕ್ಷೇತ್ರದ ಋಣ ತೀರಿಸಬೇಕಾದರೆ ಕ್ಷೇತ್ರದ ಜನಕ್ಕಾಗಿ ಕೆಲಸ ಮಾಡಬೇಕು. ಅದಕ್ಕಾಗಿಯೇ ಪಕ್ಷ ತೊರೆದು ರಮೇಶ್ ಜಾರಕಿಹೊಳಿ ಮತ್ತು ನಾವು ಹೊರ ಬಂದಿದ್ದೇವೆ. ನಮಗೆ ಬಿಜೆಪಿ ಮುಖ್ಯವೇ ವಿನಃ, ಯಾವ ವ್ಯಕ್ತಿಯೂ ಅಲ್ಲ ಎಂದರು.
Next Story