ಸರಕಾರಿ ನೌಕರರ ಶವ ಸಂಸ್ಕಾರ ಸಹಾಯಧನ ಹೆಚ್ಚಳ
ಬೆಂಗಳೂರು, ನ.17: ಸರಕಾರಿ ಕರ್ತವ್ಯದಲ್ಲಿರುವಾಗ ಮರಣ ಹೊಂದಿದ ನೌಕರರ ಶವ ಸಂಸ್ಕಾರ ಸಹಾಯಧನವನ್ನು 5 ಸಾವಿರದಿಂದ 15 ಸಾವಿರಕ್ಕೆ ಹೆಚ್ಚಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಇತ್ತೀಚಿಗೆ ರಾಜ್ಯ ಸರಕಾರಿ ನೌಕರರ ಸಂಘ ಸಹಾಯಧನವನ್ನು 25 ಸಾವಿರಕ್ಕೆ ಹೆಚ್ಚಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿತ್ತು. ಈ ಮನವಿಗೆ ಸ್ಪಂದಿಸಿ ಆಯಾ ಪ್ರಕರಣಗಳಿಗೆ ಅನುಸಾರವಾಗಿ ಗರಿಷ್ಠ 15 ಸಾವಿರ ಮಂಜೂರು ಮಾಡಬಹುದು ಎಂದು ಆದೇಶಿಸಿದೆ.
Next Story