ತನ್ವೀರ್ ಸೇಠ್ ಮೇಲೆ ಮಾರಣಾಂತಿಕ ಹಲ್ಲೆ: ಆರೋಪಿಗೆ 12 ದಿನ ಪೊಲೀಸ್ ಕಸ್ಟಡಿ
ಮೈಸೂರು: ಶಾಸಕ ತನ್ವೀರ್ ಸೇಠ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಿ ಫರ್ಹಾನ್ ಗೆ 12 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಮಾಜಿ ಸಚಿವ ತನ್ವೀರ್ ಸೇಠ್ ಮೇಲೆ ಕೊಲೆಯತ್ನ ನಡೆಸಿ ಪೊಲೀಸರ ಆತಿಥಿಯಾಗಿದ್ದ ಗೌಸಿಯಾನಗರದ ನಿವಾಸಿ ಫರ್ಹಾನ್ ನನ್ನು ಪೊಲೀಸರು ಇಂದು ಜಿಲ್ಲಾ ಒಂದನೇ ಜೆಎಂಎಫ್ಸಿ ನ್ಯಾಯಾದೀಶ ಮುಂದೆ ಹಾಜರುಪಡಿಸಿ ಸಂಪೂರ್ಣ ವಿಚಾರಣೆಗಾಗಿ 15 ದಿನಗಳ ಕಾಲಾವಕಾಶ ನೀಡಿ ಪೊಲೀಸ್ ಕಸ್ಟಡಿಗೆ ಒಪ್ಪಿಸುವಂತೆ ಮನವಿ ಮಾಡಿದರು.
ಆದರೆ ಒಂದೇ ಹೆಚ್ಚುವರಿ ನ್ಯಾಯಾದೀಶರು ಅಷ್ಟು ಕಾಲವಾಕಾಶ ನೀಡಲು ಸಾಧ್ಯವಿಲ್ಲ. ಬೇಗ ವಿಚಾರಣೆ ನಡೆಸಿ ಎಂದು ಹೇಳಿ 12 ದಿನಗಳ ವರೆಗೆ ಪೊಲೀಸ್ ಕಸ್ಟಡಿಗೆ ವಹಿಸಿದರು.
ಆರೋಪಿ ಸೇರಿದಂತೆ ಐವರ ವಿಚಾರಣೆ: ಆರೋಪಿ ಸೇರಿದಂತೆ ಐವರನ್ನು ವಶಕ್ಕೆ ಪಡೆದಿರುವ ಪೊಲೀಸರು ಗೌಪ್ಯ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.
ಆರೋಪಿ ಫರ್ಹಾನ್ ನ ಎರಡು ತಿಂಗಳ ಚಲನವಲನದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಆತನ ಮನೆಯ ಸುತ್ತಮುತ್ತಲಿನ ಜನ ಮತ್ತು ಸಂಬಂಧಿಕರನ್ನು ವಿಚಾರಿಸಿ ಆತನ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ.