ಎಸ್.ವೈ.ಎಸ್ ಚಿಕ್ಕಮಗಳೂರು ಜಿಲ್ಲೆ ನೂತನ ಪದಾಧಿಕಾರಿಗಳ ಆಯ್ಕೆ
ಚಿಕ್ಕಮಗಳೂರು, ಡಿ.4: ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ (ಎಸ್.ವೈ.ಎಸ್.) ಚಿಕ್ಕಮಗಳೂರು ಜಿಲ್ಲಾ ಘಟಕದ ಮಹಾಸಭೆಯು ಬಾಳೆಹೊನ್ನೂರು ಮಸೀದಿಕೆರೆ ಸಮುದಾಯ ಭವನದಲ್ಲಿ ಸಯ್ಯಿದ್ ಎ.ಪಿ.ಎಸ್ ಹುಸೈನುಲ್ ಅಹ್ದಲ್ ತಂಙಳ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಮಾರಂಭವನ್ನು ಕರ್ನಾಟಕ ಹಜ್ ಕಮಿಟಿ ಸದಸ್ಯ ಕೆ.ಎಂ.ಅಬೂಕರ್ ಸಿದ್ದೀಖ್ ಮೋಂಟುಗೋಳಿ ಉದ್ಘಾಟಿಸಿದರು. ರಾಜ್ಯ ಎಸ್.ವೈ.ಎಸ್.ಪ್ರಧಾನ ಕಾರ್ಯದರ್ಶಿ ಡಾ.ಎಮ್ಮೆಸ್ಸೆಂ. ಝೈನೀ ಕಾಮಿಲ್ ಮಹಾಸಭೆ ನಿರ್ವಹಿಸಿದರು.
ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಕೆ.ಪಿ.ಅಬೂಬಕರ್ ಉಪ್ಪಳ್ಳಿ, ಪ್ರಧಾನ ಕಾರ್ಯದರ್ಶಿಯಾಗಿ ಟಿ.ಟಿ.ಇಸ್ಮಾಯಿಲ್ ಬಾಳೆಹೊನ್ನೂರು, ಕೋಶಾಧಿಕಾರಿಯಾಗಿ ಸಯ್ಯಿದ್ ಎ.ಪಿ.ಎಸ್.ಹುಸೈನುಲ್ ಅಹ್ದಲ್ ಬಾಖವಿ ನೇಮಕಗೊಂಡರು.
ಉಪಾಧ್ಯಕ್ಷರಾಗಿ ಹಸನ್ ಮುಅಲ್ಲಿಂ ಬಾಳೆಹೊಳೆ (ಸಂಘಟನೆ ಮತ್ತು ತರಬೇತಿ), ಮೌಲಾನಾ ಕೆ.ಎಂ.ಅಬೂಬಕರ್ ಸಿದ್ದೀಖ್ ಜಯಪುರ (ಶಿಕ್ಷಣ ಮತ್ತು ದ'ಅವಾ) ಕಾರ್ಯದರ್ಶಿಗಳಾಗಿ ಮುನೀರ್ ಶಾಂತಿನಗರ್ (ವೆಲ್ಫೇರ್), ಅಬ್ದುಲ್ ಅಝೀಝ್ ಮಾಗುಂಡಿ (ಇಸಾಬಾ), ಸುಲೈಮಾನ್ ಶೆಟ್ಟಿಕೊಪ್ಪ (ಈವೆಂಟ್ ಮ್ಯಾನೇಜ್ಮೆಂಟ್), ಉಸ್ಮಾನ್ ಹಂಡುಗುಳಿ (ಪಬ್ಲಿಕೇಶನ್ ಆಂಡ್ ಮೀಡಿಯಾ), ಹೈದರ್ ತರೀಕೆರೆ (ಆಫೀಸ್ ಆಂಡ್ ಅಡ್ಮಿನಿಸ್ಟ್ರೇಶನ್) ಆಯ್ಕೆಯಾದರು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸಯ್ಯಿದ್ ಹಾಮೀಂ ಶಿಹಾಬುದ್ದೀನ್ ತಂಙಳ್ ಮಿಸ್ಬಾಹಿ ಕಾಮಿಲ್ ಸಖಾಫಿ ಬಾಳೆಹೊನ್ನೂರು, ಯೂಸುಫ್ ಹಾಜಿ ಉಪ್ಪಳ್ಳಿ, ಯೂಸುಫ್ ಆಲ್ದೂರು, ಪುತ್ತುಮೋನಾಕ ಕಡಬಗೆರೆ, ಸೆಯ್ದಾಲಿ ಚಿಕ್ಕಮಗಳೂರು, ಇಬ್ರಾಹೀಂ ಆಲ್ದೂರು, ಅಬ್ದುಲ್ ರಶೀದ್ ಜಯಪುರ, ಅಬ್ದುಲ್ ರಹ್ಮಾನ್ ಎನ್.ಆರ್.ಪುರ, ಮುಹಮ್ಮದ್ ರಫೀಖ್ ಎನ್.ಆರ್.ಪುರ, ಸುಲೈಮಾನ್ ಎನ್.ಎ., ಅಬೂಬಕರ್ ಸಿದ್ದೀಖ್ ಅಲ್ ಬದ್ರಿಯಾ, ಕೆ.ಎಂ.ಇಬ್ರಾಹಿಂ ಶಾಂತಿನಗರ್, ಅಬ್ದುಲ್ ರಹ್ಮಾನ್ ಜಯಪುರ, ರಜಬ್ ಕೊಪ್ಪ, ನಾಸಿರ್ ಮೂಡಿಗೆರೆ ಆಯ್ಕೆಯಾದರು.
ರಾಜ್ಯ ಕೌನ್ಸಿಲ್ ಸದಸ್ಯರಾಗಿ ಸಯ್ಯಿದ್ ಎ.ಪಿ.ಎಸ್. ತಂಙಳ್ ಉಪ್ಪಳ್ಳಿ, ಯೂಸುಫ್ ಹಾಜಿ ಉಪ್ಪಳ್ಳಿ, ಕೆ.ಪಿ.ಅಬೂಬಕರ್, ಕೆ.ಎಂ.ಅಬೂಬಕರ್ ಸಿದ್ದೀಖ್ ಜಯಪುರ, ಹಸನ್ ಮುಅಲ್ಲಿಂ ಬಾಳೆಹೊಳೆ, ಉಸ್ಮಾನ್ ಹಂಡುಗುಳಿ, ಅಝೀಝ್ ಮಾಗುಂಡಿ, ಮುನೀರ್ ಶಾಂತಿ ನಗರ, ಸುಲೈಮಾನ್ ಶೆಟ್ಟಿಕೊಪ್ಪ, ಶೇಖ್ ಅಹ್ಮದ್ ಚಿಕ್ಕಮಗಳೂರು ಅವರನ್ನು ನೇಮಿಸಲಾಯಿತು.
ಸಭೆಯ ಪ್ರಾರಂಭದಲ್ಲಿ ಸಯ್ಯಿದ್ ಹಾಮೀಂ ಶಿಹಾಬ್ ತಂಙಳ್ ಪ್ರಾರ್ಥನೆ ನಡೆಸಿದರು. ಟೀಂ ಇಸಾಬಾ ಡೈರೆಕ್ಟರ್ ಉಮರ್ ಸಖಾಫಿ ಎಡಪ್ಪಾಲ್ ಶುಭ ಹಾರೈಸಿದರು. ಮುನೀರ್ ಶಾಂತಿನಗರ್ ಸ್ವಾಗತಿಸಿ, ಟಿ.ಟಿ. ಇಸ್ಮಾಯಿಲ್ ಧನ್ಯವಾದ ಸಲ್ಲಿಸಿದರು.