ಹನೂರು ಪಟ್ಟಣ ಪಂಚಾಯತ್ ಸಮುದಾಯ ಸಂಘಟಕ ಅಮಾನತು
ಹನೂರು, ಡಿ.12: ಸೇವೆಯಲ್ಲಿ ಅವ್ಯವಹಾರ ಎಸಗಿರುವ ಆರೋಪದ ಮೇಲೆ ಹನೂರು ಪಟ್ಟಣ ಪಂಚಾಯತ್ ಸಮುದಾಯ ಸಂಘಟಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಎಸ್.ಎನ್ ಭೈರಪ್ಪರವರನ್ನು ಪೌರಾಡಳಿತ, ಬೆಂಗಳೂರು ನಿರ್ದೇಶಕರು ಅಮಾನತು ಮಾಡಿರುವ ಬಗ್ಗೆ ಆದೇಶ ಹೊರಡಿಸಿದ್ದಾರೆ.
ಸಾರ್ವಜನಿಕರು ಮತ್ತು ಪಪಂ ಸದಸ್ಯರು ಸರ್ವೆ ನಂಬರ್ ಗಳ ಜಮೀನುಗಳ ಅಕ್ರಮ ಖಾತೆ ಮಾಡಿ ಎಂದು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ ಹಿನ್ನೆಲೆಯಲ್ಲಿ, ಯೋಜನಾಧಿಕಾರಿಗಳ ನೇತೃತ್ವದ ತಂಡ ತಪಾಸಣೆ ನಡೆಸಿ ಹಲವಾರು ಅವ್ಯವಾಹರಗಳು ಪತ್ತೆ ಹಚ್ಚಿದ ಹಿನ್ನೆಲೆ ಈ ಆದೇಶ ಹೊರಡಿಸಿದ್ದಾರೆ ಎನ್ನಲಾಗಿದೆ.
Next Story