ರಸ್ತೆ ಮಧ್ಯೆಯೇ ಹೊತ್ತಿ ಉರಿದ ಓಮ್ನಿ
ಚಾಮರಾಜನಗರ, ಡಿ.30: ಚಲಿಸುತ್ತಿದ್ದ ಮಾರುತಿ ಓಮ್ನಿ ಕಾರೊಂದು ಹುರುಳಿ ಸುತ್ತಿಕೊಂಡ ಪರಿಣಾಮ ಹೊತ್ತಿ ಉರಿದ ಘಟನೆ ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಗ್ರಾಮದ ಬಳಿ ನಡೆದಿದೆ.
ಕೇರಳದ ರಾಜ್ಯದ ಕಲ್ಪೇಟ ನಿವಾಸಿಯಾದ ಅಶೋಕ ಅವರಿಗೆ ಸೇರಿದ್ದ ಮಾರುತಿ ಓಮ್ನಿ ಕಾರು ಭೀಮನಬೀಡು ಗ್ರಾಮದ ಬಳಿ ಹೊತ್ತಿ ಉರಿದಿದೆ. ಅದೃಷ್ಟವಶಾತ್ ಓಮ್ನಿಯಲ್ಲಿ ಪ್ರಯಾಣಿಸುತ್ತಿದ್ದ ಯಾರಿಗೂ ಅಪಾಯವಾಗಿಲ್ಲ. ಕಾರಿನಲ್ಲಿ ಅಶೋಕ್ ಹಾಗೂ ಅವರ ಪತ್ನಿ, ಮಕ್ಕಳು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.
ಒಕ್ಕಣೆ ಮಾಡಲು ರೈತರು ರಸ್ತೆಯಲ್ಲಿ ಹುರುಳಿ ಸತ್ತೆ ಹಾಕಿಕೊಂಡಿದ್ದು, ಕಾರಿನ ಚಕ್ರಗಳಿಗೆ ಹುರುಳಿ ಸತ್ತೆ ಸುತ್ತಿಕೊಂಡು ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಅಶೋಕ್ ತಕ್ಷಣವೇ ಕಾರಿನಲ್ಲಿದ್ದವರನ್ನು ಕೆಳಗಿಳಿಸಿದ್ದಾರೆ ಎಂದು ತಿಳಿದುಬಂದಿದೆ.
Next Story