ಗಮನ ಬೇರೆಡೆ ಸೆಳೆದು 50 ಸಾವಿರ ರೂ. ಎಗರಿಸಿದ ಕಳ್ಳರು
ಸಾಂದರ್ಭಿಕ ಚಿತ್ರ
ಮೈಸೂರು,ಜ.8: ವ್ಯಕ್ತಿಯೊಬ್ಬರು ಬ್ಯಾಂಕ್ ನಿಂದ ಹಣ ಡ್ರಾ ಮಾಡಿ ತರುವಾಗ ದುಷ್ಕರ್ಮಿಗಳು ಅವರ ಗಮನ ಬೇರೆಡೆ ಸೆಳೆದು 50 ಸಾವಿರ ರೂ. ಎಗರಿಸಿ ಪರಾರಿಯಾದ ಘಟನೆ ಆಕಾಶವಾಣಿ ಸಮೀಪ ನಡೆದಿದೆ.
ಆಕಾಶವಾಣಿ ಸಮೀಪ ಚಂದ್ರು ಎಂಬುವರು 50 ಸಾವಿರ ರೂ. ಡ್ರಾ ಮಾಡಿಕೊಂಡು ಬೈಕಿನಲ್ಲಿ ಇಟ್ಟುಕೊಂಡು ನಿಂತಿದ್ದಾಗ ವ್ಯಕ್ತಿಯೋರ್ವ ಶರ್ಟ್ ಮೇಲೆ ಕಸ ಬಿದ್ದಿದೆ ಎಂದು ತಿಳಿಸಿದ್ದಾನೆ. ಮತ್ತೋರ್ವ ಸ್ವಲ್ಪ ದೂರದಲ್ಲಿ ಹಣ ಬಿದ್ದಿದೆ ಎಂದು ತಿಳಿಸಿದ್ದಾನೆ. ಈ ವೇಳೆ ಹಣ ತೆಗೆದುಕೊಳ್ಳಲು ಹೋದಾಗ ಕಳ್ಳರು ಬೈಕಿನಲ್ಲಿಟ್ಟಿದ್ದ ಹಣವನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ. ಈ ಸಂಬಂಧ ವಿ.ವಿ.ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story