ಸಿಎಎ-ಎನ್ಆರ್ಸಿ ವಿರೋಧಿಸಿ ರಕ್ತದ ಸಹಿ ಸಂಗ್ರಹ ಚಳವಳಿ
ಸಾಂದರ್ಭಿಕ ಚಿತ್ರ
ರಾಯಚೂರು, ಜ.19: ಕೇಂದ್ರ ಸರಕಾರ ಜಾರಿಗೊಳಿಸಿದ ಪೌರತ್ವ ತಿದ್ದುಪಡಿ ಕಾಯ್ದೆ, ಎನ್ಆರ್ಸಿ ಮತ್ತು ಎನ್ಆರ್ಪಿ ವಿರೋಧಿಸಿ ಸಿಂಧನೂರಿನಲ್ಲಿ ರಕ್ತದ ಸಹಿ ಸಂಗ್ರಹ ಚಳವಳಿ ನಡೆಸಲಾಯಿತು.
ಸಿಂಧನೂರಿನ ಆರ್ಜಿಎಂ ಶಾಲಾ ಮೈದಾನದಲ್ಲಿ ರವಿವಾರ ಸಿಎಎ, ಎನ್ಆರ್ಸಿ ಖಂಡಿಸಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮುಸ್ಲಿಂ ಯುವಕರು ರಕ್ತದಲ್ಲೇ ಸಹಿ ಸಂಗ್ರಹ ಮಾಡಿದರು. ನೋ ಸಿಎಎ, ನೋ ಎನ್ಆರ್ಸಿ ಮತ್ತು ನೋ ಎನ್ಆರ್ಪಿ ಎಂದು ರಕ್ತದಲ್ಲಿ ಬರೆಯುವ ಮೂಲಕ ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೇ ದೇಶಕ್ಕಾಗಿ ರಕ್ತ ಹರಿಸಲು ಸಿದ್ಧ. ರಕ್ತದಿಂದ ಸ್ವಾತಂತ್ರ ಬರೆಯುತ್ತೇವೆ ಎಂಬಂಥ ಘೋಷಣೆ ಬರೆಯಲಾಗಿದೆ. ಅದರ ಜತೆಗೆ ರಾಷ್ಟ್ರಪತಿಗೆ ಪತ್ರ ಚಳವಳಿ ಕೂಡ ನಡೆಸಲಾಯಿತು.
Next Story