ರಸ್ತೆ ಬದಿ ಹೂ, ತರಕಾರಿ ಖರೀದಿಸಿ, ವ್ಯಾಪಾರಿಗಳನ್ನು ಮಾತಾಡಿಸಿದ ಸುಧಾಮೂರ್ತಿ
ಬಾಗಲಕೋಟೆ, ಫೆ. 2: ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಹಾಗೂ ಲೇಖಕಿ ಸುಧಾಮೂರ್ತಿ ನಗರದ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವವರ ಬಳಿ ಚೌಕಾಸಿಯಿಲ್ಲದೆ ಹೂವು ಮತ್ತು ತರಕಾರಿ ಖರೀದಿಸುವ ಮೂಲಕ ಸರಳತೆ ಮೆರೆದಿದ್ದಾರೆ.
ರವಿವಾರ ಮುಂಜಾನೆ ಜಮಖಂಡಿಯ ಎಪಿಎಂಸಿ ಆವರಣದಲ್ಲಿ ನಡೆಯುವ ವಾರದ ಸಂತೆಗೆ ಬಂದ ಸುಧಾಮೂರ್ತಿ, ವ್ಯಾಪಾರಿಗಳನ್ನು ಮಾತನಾಡಿಸಿ ಅವರ ಕಷ್ಟಗಳನ್ನು ಆಲಿಸಿ ಸಾಮಾನ್ಯರಂತೆ ಕೈಯಲ್ಲಿ ಚೀಲ ಹಿಡಿದು ತರಕಾರಿ-ಹೂವು ಖರೀದಿ ಮಾಡಿದ್ದಾರೆ.
ಜಮಖಂಡಿ ತಾಲೂಕಿನಲ್ಲಿರುವ ತಮ್ಮ ಮನೆ ದೇವರು ಶೂರ್ಪಾಲಿಯ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ಪೂಜೆ ಮಾಡಿಸಲು ಬಂದಿದ್ದರು. ಈ ವೇಳೆ ಜಮಖಂಡಿಯ ಕುಂಚನೂರು ರಸ್ತೆಯ ಕೆಎಚ್ವಿ ಕಾಲನಿ ದಾನಮ್ಮನ ಗುಡಿಯಲ್ಲಿ ತಮ್ಮ ಸಂಬಂಧಿಕರ ಮನೆಯಲ್ಲಿ ಸುಧಾಮೂರ್ತಿಯವರು ಉಳಿದುಕೊಂಡಿದ್ದರು. ಈ ವೇಳೆ ಕೃಷ್ಣಾ ನದಿ ಪ್ರವಾಹದಿಂದ ಬಳಲಿದ್ದ ರೈತರನ್ನು ಮಾತನಾಡಿಸಲು ಸ್ವತಃ ಅವರೇ ಮಾರುಕಟ್ಟೆಗೆ ಬಂದಿದ್ದರು.
Next Story