ಪಾಕಿಸ್ತಾನ ಜಿಂದಾಬಾದ್ ಎಂದ ಅಮೂಲ್ಯ ಯುವಕನಾಗಿದ್ದರೆ ಕಪಾಳ ಮೋಕ್ಷ ಮಾಡುತ್ತಿದ್ದೆ: ಉವೈಸಿ
ಬೆಂಗಳೂರು, ಫೆ.20: ಪಾಕಿಸ್ತಾನ ಜಿಂದಾಬಾದ್ ಎಂದು ಆಕೆ ಹೇಳಿದನ್ನು ನಾನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಒಂದು ವೇಳೆ, ಅಮೂಲ್ಯ ಯುವಕನಾಗಿದ್ದರೆ, ಕಪಾಳ ಮೋಕ್ಷ ಮಾಡುತ್ತಿದ್ದೆ ಎಂದು ಎಐಎಂಐಎಂ ಅಧ್ಯಕ್ಷ, ಸಂಸದ ಅಸದುದ್ದೀನ್ ಉವೈಸಿ ತಿಳಿಸಿದರು.
ಘಟನೆಯನ್ನು ವೇದಿಕೆಯಲ್ಲಿಯೇ ತೀವ್ರವಾಗಿ ಖಂಡಿಸಿ ಮಾತನಾಡಿದ ಅವರು, ಪಾಕಿಸ್ತಾನ ಪರ ಘೋಷಣೆ ಕೂಗಿದವರಿಗೂ ನಮ್ಮ ಪಕ್ಷಕ್ಕೂ, ನನಗೂ ಯಾವುದೇ ಸಂಬಂಧವಿಲ್ಲ. ಇಂತಹ ಕೃತ್ಯಗಳನ್ನು ನಾವು ಖಂಡಿಸುತ್ತೇನೆ. ಈ ರೀತಿ ಯಾರೂ ಹೇಳಬಾರದು ಎಂದು ಹೇಳಿದರು.
ಸಿಎಎ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಯಾರನ್ನು ಆಹ್ವಾನಿಸಬೇಕು ಎನ್ನುವ ಬಗ್ಗೆ ಆಯೋಜಕರಿಗೆ ಗಮನ ಇರಬೇಕು. ಏಕೆ ಅವರನ್ನು ಕರೆತರಲಾಗುತ್ತಿದೆ ಎನ್ನುವ ಪ್ರಜ್ಞೆ ಇರಬೇಕು. ಅವರು (ಅಮೂಲ್ಯ) ಏಕೆ ನಮ್ಮ ವೇದಿಕೆಯಲ್ಲಿ ಈ ರೀತಿಯ ಕೃತ್ಯವೆಸಗಿದರು ಎಂದ ಅವರು, ಬಿಜೆಪಿಗೆ ಇಂತಹ ಹೇಳಿಕೆಗಳೇ ಬಂಡವಾಳ. ಇದೀಗ ಅವರು ನನ್ನನ್ನು ಹೊಸ ರೀತಿಯಲ್ಲಿ ಬಿಂಬಿಸಿ ಟೀಕಿಸುತ್ತಾರೆ ಎಂದರು.
Next Story