ಮಡಿಕೇರಿ: ವೈದ್ಯರ ಮೇಲೆ ಹಲ್ಲೆಗೆ ಯತ್ನ ಆರೋಪ; ಪ್ರಕರಣ ದಾಖಲು
ಮಡಿಕೇರಿ, ಫೆ.23: ಮೂರ್ನಾಡುವಿನ ಖಾಸಗಿ ಕ್ಲಿನಿಕ್ವೊಂದಕ್ಕೆ ತೆರಳಿದ ಯುವಕನೋರ್ವ ವೈದ್ಯರ ಮೇಲೆ ಹಲ್ಲೆಗೆ ಯತ್ನಿಸಿ ಕ್ಲಿನಿಕ್ನಲ್ಲಿರುವ ವಸ್ತುಗಳಿಗೆ ಹಾನಿ ಉಂಟು ಮಾಡಿದ ಕುರಿತು ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೊಂಡಂಗೇರಿ ನಿವಾಸಿ ನೌಫಲ್ ಎಂಬಾತ ತನ್ನ ತಾಯಿಗೆ ಚಿಕಿತ್ಸೆ ಕೊಡಿಸಲೆಂದು ಮೂರ್ನಾಡುವಿನ ವೈದ್ಯರಾದ ಅಬ್ದುಲ್ಲ ಎಂಬುವವರ ಕ್ಲಿನಿಕ್ಗೆ ಕರೆದೊಯ್ದಿದ್ದಾನೆ. ಈ ಸಂದರ್ಭ ಟೋಕನ್ ಪ್ರಕ್ರಿಯೆಯಂತೆ ಸ್ವಲ್ಪ ಸಮಯ ಕಾಯುವಂತೆ ಸೂಚಿಸಿದ್ದಾರೆ. ಇದರಿಂದ ವೈದ್ಯರ ಮೇಲೆ ಆಕ್ರೋಶಗೊಂಡು ವೈದ್ಯರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದಲ್ಲದೆ ಕ್ಲಿನಿಕ್ನ ಗಾಜನ್ನು ಪುಡಿಗಟ್ಟಿದ್ದಾನೆ ಎನ್ನಲಾಗಿದೆ. ಅಲ್ಲದೇ, ಬೆಂಚಿನಿಂದ ನನ್ನ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದಾನೆ ಎಂದು ಆರೋಪಿಸಿ ವೈದ್ಯ ಅಬ್ದುಲ್ಲ ಅವರು ಮಡಿಕೇರಿ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.
ಈ ಬಗ್ಗೆ ಮೊಕದ್ದಮೆ ದಾಖಲಿಸಿಕೊಂಡಿರುವ ಠಾಣಾಧಿಕಾರಿ ಚಂದ್ರಶೇಖರ್ ಮುಂದಿನ ಕ್ರಮ ಕೈಗೊಂಡಿದ್ದಾರೆ.
Next Story