ಪ್ರವಾದಿ ನಿಂದನೆ: ಆರೋಪಿ ‘ಮಧುಗಿರಿ ಮೋದಿ’ಯ ಬಂಧನ
ತುಮಕೂರು, ಫೆ.26: ಪ್ರವಾದಿ ಮುಹಮ್ಮದ್(ಸ.) ಅವರನ್ನು ನಿಂದಿಸಿ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಪೋಸ್ಟ್ಗಳನ್ನು ಹಾಕಿದ ಆರೋಪಿಯನ್ನು ತುಮಕೂರು ಪೊಲೀಸರು ಅನಂತಪುರದ ಆಝಾದ್ ನಗರದಲ್ಲಿ ಬಂಧಿಸಿದ್ದಾರೆ. ಬಂಧಿತನಿಂದ ಎರಡು ಮೊಬೈಲ್ ಫೋನ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮಧುಗಿರಿಯ ದೊಡ್ಡೇರಿ ಹೋಬಳಿ ಹೊನ್ನಾಪುರ ಗ್ರಾಮದ ಅತುಲ್ ಕುಮಾರ್ ಸಬರ್ ವಾಲ್ ಅಲಿಯಾಸ್ ‘ಮಧುಗಿರಿ ಮೋದಿ’ ಬಂಧಿತ ಆರೋಪಿ.
ಮಧುಗಿರಿ ಮೋದಿಯನ್ನು ಬಂಧಿಸುವಂತೆ ತುಮಕೂರು ನಗರ ಹಾಗೂ ಮಧುಗಿರಿಯಲ್ಲಿ ಪ್ರತಿಭಟನೆ ನಡೆಸಿದ್ದ ಹಿನ್ನೆಲೆ ಪೊಲೀಸ್ ವರಿಷ್ಠಾಧಿಕಾರಿ ಡಾ.ವಂಶಿಕೃಷ್ಣ ರಚಿಸಿದ್ದ ಎರಡು ತಂಡಗಳು ಅತುಲ್ಕುಮಾರ್ ಬಂಧನಕ್ಕೆ ಕಾರ್ಯಾಚರಣೆ ನಡೆಸಿದ್ದು, ಬಂಧಿತ ಆರೋಪಿಯಿಂದ ಎರಡು ಮೊಬೈಲ್ ಅನ್ನು ವಶಕ್ಕೆ ಪಡೆಯಲಾಗಿದೆ.
ಇತನ ವಿರುದ್ಧ ಮಧುಗಿರಿ, ತುಮಕೂರು ನಗರದ ಜಯನಗರ, ಚಿತ್ರದುರ್ಗ ಗ್ರಾಮಾಂತರ, ಗಂಗಾವತಿ, ಶಿವಮೊಗ್ಗ ಜಿಲ್ಲೆಯ ಜಯನಗರ, ಕೊಡಗು ಜಿಲ್ಲೆಯ ನಾಪ್ಲೋಕು ಹಾಗೂ ದ.ಕ. ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೋಮು ಅವಹೇಳನ ಪ್ರಕರಣಗಳು ದಾಖಲಾಗಿವೆ.
ಆರೋಪಿಯ ಬಂಧನಕ್ಕಾಗಿ ಮಹಾರಾಷ್ಟ್ರ ಹಾಗೂ ಆಂಧ್ರ ಪ್ರದೇಶದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಅತುಲ್ಕುಮಾರ್ ಅಲಿಯಾಸ್ ಮಧುಗಿರಿ ಮೋದಿಯನ್ನು ಬಂಧಿಸಲು ಯಶಸ್ವಿದ ಪೊಲೀಸ್ ತಂಡಕ್ಕೆ ಎಸ್ಪಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.