ಚಿತ್ರರಂಗದಿಂದ ನಟ ಸುದೀಪ್ ರನ್ನು ದೂರವಿಡಲು ಒತ್ತಾಯ: ಚಲನಚಿತ್ರ ವಾಣಿಜ್ಯ ಮಂಡಳಿಗೆ ಮನವಿ
ಬೆಂಗಳೂರು, ಫೆ.26: ರಮ್ಮಿ ಜಾಹೀರಾತಿನಲ್ಲಿ ನಟನೆ ಸಂಬಂಧ ಕನ್ನಡ ಚಿತ್ರರಂಗದಿಂದ ನಟ ಸುದೀಪ್ರನ್ನು ದೂರವಿಡಬೇಕೆಂದು ಒತ್ತಾಯಿಸಿ ಕನ್ನಡ ಪರ ಸಂಘಟನೆ ಕಾರ್ಯಕರ್ತರು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಗೆ ಮನವಿ ಸಲ್ಲಿಸಿದರು.
ಬುಧವಾರ ನಗರದ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಮುಂಭಾಗ ಜಮಾಯಿಸಿದ ಕನ್ನಡಪರ ಸಂಘಟನೆ ಕಾರ್ಯಕರ್ತರು, ರಮ್ಮಿ ಒಂದು ಜೂಜಾಟ. ಇದನ್ನು ನಟ ಸುದೀಪ್ ಉತ್ತೇಜಿಸುತ್ತಿದ್ದು, ಈ ಮೂಲಕ ಸಹಸ್ರಾರು ಅಭಿಮಾನಿಗಳನ್ನು ಕೆಟ್ಟ ದಾರಿಗೆ ಪ್ರಚೋದಿಸುತ್ತಿದ್ದಾರೆ ಎಂದು ಆರೋಪಿಸಿದರು.
ಒಂದು ವೇಳೆ ಸುದೀಪ್ ಅವರು ಜಾಹೀರಾತಿನಿಂದ ಹೊರಬರದೇ ಇದ್ದರೆ ಚಿತ್ರರಂಗದಿಂದ ನಿಷೇಧಿಸಬೇಕು. ಈ ಸಂಬಂಧ ಸೂಕ್ತ ನಿರ್ಧಾರ ಪ್ರಕಟಿಸದೆ ಇದ್ದಲ್ಲಿ, ಹೋರಾಟ ನಡೆಸಲಾಗುವುದೆಂದು ಕನ್ನಡ ಪರ ಸಂಘಟನೆಯ ಅಧ್ಯಕ್ಷ ಶಿವಕುಮಾರ್ ನಾಯಕ್ ಹೇಳಿದರು.
Next Story