ರೈತರ ಜಮೀನಿಗೆ ಆನೆಗಳ ದಾಳಿ: ಬೆಳೆ ನಾಶ
ಗುಂಡ್ಲುಪೇಟೆ,ಮಾ.4: ತಾಲೂಕಿನ ಕಾಡಂಚಿನಲ್ಲಿರುವ ಕಡಬೂರು ಗ್ರಾಮದ ಕೃಷಿ ಜಮೀನಿಗೆ ಕಾಡಾನೆಗಳು ದಾಳಿ ಮಾಡಿ ಅಪಾರ ಪ್ರಮಾಣದ ಬಾಳೆ ಬೆಳೆ ನಾಶ ಮಾಡಿವೆ.
ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಕುಂದಕೆರೆ ವಲಯ ವ್ಯಾಪ್ತಿಯ ಕಾಡಂಚಿನ ಗ್ರಾಮವಾದ ಕಡಬೂರು ರೈತರ ಕೃಷಿಹೊಂಡ ಸಾಮಗ್ರಿ, ಬಾಳೆ, ಟೊಮ್ಯಾಟೊ ಬೆಳೆ ಆನೆಗಳಿಂದ ನಾಶವಾಗಿದೆ.
ಗ್ರಾಮದ ಮಂಜುನಾಥ್, ಗುರುಸ್ವಾಮಿ, ರಾಜಪ್ಪ , ಕುಮಾರ್ ಎಂಬುವವರ ಜಮೀನಿನಲ್ಲಿ ಬೆಳೆ ನಾಶ ಪಡಿಸಿರುವ ಜೋಡಿ ಆನೆಗಳು ಇತ್ತೀಚಿಗೆ ಕಾಡಾನೆ ಕಾಡಂಚಿನ ಗ್ರಾಮಗಳಾದ ಕಡಬೂರು ಕಗ್ಗಳಹುಂಡಿ, ಚೆನ್ನಮಲ್ಲಿಪುರ, ಮಂಗಲ ಮುಂತಾದ ಗ್ರಾಮಗಳಿಗೆ ಕಾಡಾನೆ ಆಗಿಂದಾಗೆ ದಾಳಿ ಮಾಡಿ ರೈತರು ಬೆಳೆದಿರುವ ಫಸಲುನ್ನು ನಾಶ ಮಾಡುತ್ತಿದ್ದು, ಹಲವಾರು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದರು ಯಾವುದೇ ಪ್ರಯೋಜನವಾಗಿಲ್ಲ.
ಕಾಡಿನಿಂದ ನಾಡಿಗೆ ಲಗ್ಗೆ ಇಟ್ಟಿರುವ ಆನೆಗಳ ಉಪಟಳ ತಪ್ಪಿಸುವಂತೆ ರೈತರ ಹಲವಾರು ಬಾರಿ ಬಂಡೀಪುರ ಸಿ.ಎಫ್.ಗೆ ದೂರವಾಣಿ ಮೂಲಕ ತಿಳಿಸಿದ್ದರೂ ಯಾವುದೇ ಕ್ರಮವಹಿಸುತ್ತಿಲ್ಲ ಎಂದು ಕಡಬೂರು ಮಂಜುನಾಥ ಆಕ್ರೋಶ ವ್ಯಕ್ತಪಡಿಸಿದ್ದಾರೆ.