ಶಿವಮೊಗ್ಗ: ಕಾರ್ಖಾನೆಯ ಮೆಷಿನ್ ಗೆ ಸಿಲುಕಿ ಯುವಕ ಮೃತ್ಯು
ಶಿವಮೊಗ್ಗ : ಕಾರ್ಖಾನೆಯ ಮೆಷಿನ್ ಬಳಿ ಕೆಲಸ ಮಾಡುತ್ತಿದ್ದ ವೇಳೆ ಯುವ ಕಾರ್ಮಿಕ ಸಾವನ್ನಪ್ಪಿರುವ ಘಟನೆ ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.
ಮೃತರನ್ನು ಚೇತನ್(30) ಎಂದು ಗುರುತಿಸಲಾಗಿದ್ದು, ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದರು.
ಶಾಂತಲಾ ಸ್ಪೇರ್ ಕಾಸ್ಟ್ ಕೈಗಾರಿಕೆಯಲ್ಲಿ ಸೋಮವಾರ ರಾತ್ರಿ 10-30 ರ ವೇಳೆ ಲೇತ್ ಮೆಷಿನ್ ಬಳಿ ಕೆಲಸ ಮಾಡುತ್ತಿದ್ದ ಮೆಷಿನ್ ಕಾರ್ಮಿಕನನ್ನು ಎಳೆದುಕೊಂಡಿದೆ. ಪರಿಣಾಮ ಗಂಭೀರ ಗಾಯಗಳಾಗಿದ್ದು, ಆವರನ್ನು ಮೆಗ್ಗಾನ್ ಆಸ್ಪತ್ರೆಗೆ ತೆಗೆದುಕೊಂಡು ಹೋಗುವಾಗ ದಾರಿ ಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
Next Story