ಮುಕ್ತ ವಿವಿ ಅಂಕಪಟ್ಟಿ ಹಗರಣ: ಮಾಜಿ ಪರೀಕ್ಷಾಂಗ ಕುಲಸಚಿವ ಅಮಾನತು
ಮೈಸೂರು, ಮಾ.20: ಕರ್ನಾಟಕ ರಾಜ್ಯ ಮುಕ್ತ ವಿವಿ ಅಂಕಪಟ್ಟಿ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಪರೀಕ್ಷಾಂಗ ಕುಲಸಚಿವ ಡಾ.ಕೆ.ಜೆ ಸುರೇಶ್ ಅವರನ್ನು ಅಮಾನತು ಮಾಡಿ ರಾಜ್ಯಪಾಲ ವಜೂಬಾಯಿ ರುಡಾಬಾಯಿ ವಾಲಾ ಆದೇಶ ಹೊರಡಿಸಿದ್ದಾರೆ.
ಅಂಕಪಟ್ಟಿ ಹಗರಣದಲ್ಲಿ ಪ್ರೊ.ಸುರೇಶ್ ಭಾಗಿಯಾಗಿದ್ದರು. ಹಗರಣದಿಂದಾಗಿ ವಿಶ್ವವಿದ್ಯಾನಿಲಯಕ್ಕೆ 6.30 ಕೋಟಿ ರೂ ನಷ್ಟ ಉಂಟಾಗಿತ್ತು. ಜತೆಗೆ ಕೆಎಸ್ಒಯು ಮಾನ್ಯತೆ ರದ್ದಾಗಲು ಸುರೇಶ್ ಕಾರಣಕರ್ತರಾಗಿದ್ದು, ಹೀಗಾಗಿ ಕರ್ತವ್ಯ ಲೋಪ, ಆರ್ಥಿಕ ನಷ್ಟ ಹಿನ್ನೆಲೆಯಲ್ಲಿ ಮಾರ್ಚ್ 18ರಿಂದ ಜಾರಿಗೆ ಬರುವಂತೆ ವಿವಿ ಸೇವೆಯಿಂದ ಸುರೇಶ್ ಅವರನ್ನ ಅಮಾನತು ಮಾಡಿ ರಾಜ್ಯಪಾಲ ವಜುಭಾಯಿ ವಾಲಾ ಅವರು ಆದೇಶ ಹೊರಡಿಸಿದ್ದಾರೆ.
ಪ್ರಸಕ್ತ ಸುರೇಶ್ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾಗಿದ್ದರು.
Next Story