ರಾಜ್ಯ ವಕ್ಫ್ ಮಂಡಳಿ ಗಮನ ಹರಿಸಬೇಕು: ಹೈಕೋರ್ಟ್ ಸೂಚನೆ
ಧಾರ್ಮಿಕ ಸಭೆಗಳನ್ನು ನಿಷೇಧಿಸಿ ಆದೇಶ
ಬೆಂಗಳೂರು, ಮಾ.31: ಕೇಂದ್ರ ಸರಕಾರ ಕೋವಿಡ್-19 ಹಿನ್ನೆಲೆಯಲ್ಲಿ ಎಲ್ಲ ಧಾರ್ಮಿಕ ಸಭೆಗಳನ್ನು ನಿಷೇಧಿಸಿ ಹೊರಡಿಸಿದ ಆದೇಶವನ್ನು ರಾಜ್ಯ ವಕ್ಫ್ ಮಂಡಳಿ ಗಮನಿಸಬೇಕೆಂದು ಹೈಕೋರ್ಟ್ ರಾಜ್ಯ ವಕ್ಫ್ ಮಂಡಳಿಗೆ ಸೂಚಿಸಿದೆ.
ಮುಸ್ಲಿಮರ ಪ್ರಾರ್ಥನೆಯ ವೇಳೆಯಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ವಕ್ಫ್ ಮಂಡಳಿಗೆ ನಿರ್ದೇಶಿಸಿಬೇಕೆಂದು ಅರ್ಜಿದಾರರೊಬ್ಬರು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ನ್ಯಾಯಪೀಠ ನಡೆಸಿತು.
ಕೇಂದ್ರ ಸರಕಾರವು ಕೋವಿಡ್-19 ಹರಡದಂತೆ ತಡೆಗಟ್ಟಲು ದೇವಸ್ಥಾನಗಳಲ್ಲಿನ ಪೂಜಾ ಕೈಂಕರ್ಯ ಸೇರಿ ಎಲ್ಲ ಧಾರ್ಮಿಕ ಸಭೆಗಳನ್ನು ನಿಷೇಧಿಸಿದೆ. ಹೀಗಾಗಿ, ವಕ್ಫ್ ಮಂಡಳಿಯು ಈ ಆದೇಶವನ್ನು ಗಮನಿಸಬೇಕೆಂದು ಸೂಚಿಸಿದೆ.
Next Story