ಮದ್ಯ ಸಿಗದಿದ್ದಕ್ಕೆ ನೊಂದು ವ್ಯಕ್ತಿ ಆತ್ಮಹತ್ಯೆ
ಬೆಳಗಾವಿ, ಎ.2: ಮದ್ಯ ಸಿಗಲಿಲ್ಲ ಎಂಬ ಕಾರಣಕ್ಕೆ ಇಲ್ಲಿನ ಅನಗೋಳದ ಬೆಂಡಿಗೇರಿ ಚಾಳದಲ್ಲಿ ವ್ಯಕ್ತಿಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಮೂಲತಃ ಸವದತ್ತಿಯ ದೇವೇಂದ್ರಪ್ಪ ಹಡಪದ(42) ಎಂಬುವರು ಮೃತಪಟ್ಟಿದ್ದಾರೆ. ಇವರು ಸಲೂನ್ವೊಂದರಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ದೇವೇಂದ್ರಪ್ಪ ಹಡಪದಗೆ ಮದ್ಯ ಸೇವಿಸುವ ಚಟವಿತ್ತು. ಮನೆಯವರು ಹಾಗೂ ಸಲೂನ್ ಮಾಲಕರು ಬುದ್ಧಿವಾದ ಹೇಳಿದರೂ ಕೇಳಿರಲಿಲ್ಲ. ಲಾಕ್ಡೌನ್ ಆದಾಗಿನಿಂದ ಅಂಗಡಿಯೂ ಬಂದ್ ಆಗಿತ್ತು. ಮದ್ಯ ಸಿಗಲಿಲ್ಲವೆಂದರೆ ಬದುಕಲಾಗುವುದಿಲ್ಲ ಎಂದು ಅಳುತ್ತಾ ಫೋನ್ ಕರೆ ಕಟ್ ಮಾಡಿದ್ದರು ಎಂದು ಪತ್ನಿ ಹೇಮಾವತಿ ಅವರು ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
Next Story