ರಾಜ್ಯ ಔಷಧಿ ಉಗ್ರಾಣ ನಿಗಮಕ್ಕೆ ಸಚಿವ ಯು.ಟಿ. ಖಾದರ್ ದಿಢೀರ್ ದಾಳಿ
ಮಂಗಳೂರು, ಮೇ 24: ಬಹುಕೋಟಿ ಔಷಧಿ ಖರೀದಿ ಹಗರಣ ಪ್ರಕರಣ ಹಿನ್ನೆಲೆಯಲ್ಲಿ ರಾಜ್ಯ ಔಷಧಿ ಉಗ್ರಾಣ ನಿಗಮ ಕ್ಕೆ ಸಚಿವ ಯು.ಟಿ.ಖಾದರ್ ಸೋಮವಾರ ರಾತ್ರಿ 12 ಗಂಟೆಗೆ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದರು.
ಮಾಗಡಿ ರಸ್ತೆಯಲ್ಲಿರುವ ರಾಜ್ಯ ವೇರ್ ಹೌಸಿಂಗ್ ಕಾರ್ಪೊರೇಷರ್ ಗೆ ಭೇಟಿ ನೀಡಿ ದಾಸ್ತಾನು, ಖರೀದಿ ದಾಖಲೆಗಳು, ಅವಧಿ ಮೀರಿದ ಔಷಧಿ ಸಾಗಣೆಯ ಪರಿಶೀಲಿಸಿದರು. ಈ ಸಂದರ್ಭ ಹಿರಿಯ ಅಧಿಕಾರಿಗಳು ಸಚಿವರಿಗೆ ಸಾಥ್ ನೀಡಿದರು.
ಪಾಲಿಕೆಯ ಮಾಜಿ ಆಡಳಿತ ಪಕ್ಷ ಬಿಜೆಪಿ ನಾಯಕ ಎನ್.ಆರ್. ರಮೇಶ್ ಆರೋಗ್ಯ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಎಸಿಬಿಗೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ಈ ದಾಳಿಯು ಮಹತ್ವ ಪಡೆದಿದ್ದು, ಸಚಿವ ಖಾದರ್ ಅವರು ಈ ಆರೋಪವನ್ನು ನಿರಾಕರಿಸಿದ್ದರು.
Next Story