ಅಪಪ್ರಚಾರ ಸಭ್ಯ ಸಮಾಜದ ಲಕ್ಷಣವಲ್ಲ: ಅಮಿತ್ ಶಾ ಆರೋಗ್ಯದ ಬಗ್ಗೆ ಬಿಎಸ್ವೈ ಪ್ರತಿಕ್ರಿಯೆ
ಫೈಲ್ ಚಿತ್ರ
ಬೆಂಗಳೂರು, ಮೇ 9: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಆರೋಗ್ಯದ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದು, ಕಪೋಲಕಲ್ಪಿತ ಸುಳ್ಳು ಸುದ್ದಿಗಳಿಂದ ಅಪಪ್ರಚಾರ ನಡೆಸುವುದು ಸಭ್ಯ ಸಮಾಜದ ಲಕ್ಷಣವಲ್ಲ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಯಡಿಯೂರಪ್ಪ ಅವರು, "ದುರುದ್ದೇಶಪೂರ್ವಕವಾಗಿ ಕಪೋಲಕಲ್ಪಿತ ಸುಳ್ಳು ಸುದ್ದಿಗಳಿಂದ ಅಪಪ್ರಚಾರ ನಡೆಸುವುದು ಸಭ್ಯ ಸಮಾಜದ ಲಕ್ಷಣವಲ್ಲ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ತಮ್ಮ ಆರೋಗ್ಯದ ಬಗ್ಗೆ ಸ್ಪಷ್ಟನೆ ನೀಡಿದ್ದು, ಕಾರ್ಯಕರ್ತರ ಅಭಿಮಾನ ಇಮ್ಮಡಿಯಾಗಿದೆ" ಎಂದು ತಿಳಿಸಿದ್ದಾರೆ.
Next Story