ಕೃಷಿ ಭೂಮಿ ಖರೀದಿ ಕಾಯ್ದೆ ತಿದ್ದುಪಡಿ ಉತ್ತಮ ನಿರ್ಧಾರ : ಸಚಿವ ಎಸ್.ಟಿ.ಸೋಮಶೇಖರ್
'ದುಡ್ಡು ಮಾಡುವ ದಂಧೆಗೆ ಕಡಿವಾಣ ಹಾಕಲು ಈ ನಿರ್ಧಾರ'
ದಾವಣಗೆರೆ : ಕೃಷಿ ಭೂಮಿಯನ್ನು ಯಾರು ಬೇಕಾದರೂ ಖರೀದಿಸಬಹುದು ಎಂಬ ನೂತನ ಕಾಯ್ದೆ ತಿದ್ದುಪಡಿಯು ರಾಜ್ಯ ಸರ್ಕಾರದ ಅತ್ಯುತ್ತಮ ನಿರ್ಧಾರ. ಈ ಮೂಲಕ ದುಡ್ಡು ಮಾಡುವ ದಂಧೆಗೆ ಕಡಿವಾಣ ಹಾಕಲಾಗಿದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದರು.
ಹಳೆಯ 79B ಸೆಕ್ಷನ್ ಕೇವಲ ಅಧಿಕಾರಿಗಳು ಅಕ್ರಮ ಎಸಗಲು ಕಾರಣವಾಗಿತ್ತು. ಆ ಮೂಲಕ ಹಣ ಮಾಡುವ ದಂಧೆಯಾಗಿತ್ತು. ಆ ನಿಟ್ಟಿನಲ್ಲಿ ಅದನ್ನು ತೆಗೆಯುವ ನಿರ್ಧಾರಕ್ಕೆ ಸರ್ಕಾರ ಬಂದಿರುವುದು ಎಂದು ಸುದ್ದಿಗಾರರ ಪ್ರಶ್ನೆಗೆ ಸಚಿವರು ಉತ್ತರಿಸಿದರು.
ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಸುದೀರ್ಘ ಚರ್ಚೆಯಾಗಿದ್ದು, ಕೃಷಿ ಕ್ಷೇತ್ರಕ್ಕೆ ಉತ್ತೇಜನ ಕೊಡುವ ನಿಟ್ಟಿನಲ್ಲಿ ಅನುಕೂಲಕರವಾಗಿ ತಿದ್ದುಪಡಿ ಮಾಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
Next Story