ಕೊರೋನ ಸೋಂಕು ಹೆಚ್ಚಳ ಹಿನ್ನೆಲೆ: ಹೈಕೋರ್ಟ್ ಎಲ್ಲ ಕೇಸ್ಗಳ ಕಲಾಪ ರದ್ದು
ಬೆಂಗಳೂರು, ಜೂ.30: ಬೆಂಗಳೂರಿನಲ್ಲಿ ಕೊರೋನ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಹೈಕೋರ್ಟ್ನ ಎಲ್ಲ ಕೇಸ್ಗಳ ಕಲಾಪ ರದ್ದುಗೊಳಿಸಿ, ಜೂ. 30ರಂದು, ಒಂದು ದಿನ ರಜೆ ಘೋಷಿಸಲಾಗಿದೆ.
ಹೈಕೋರ್ಟ್ನ ಕಟ್ಟಡವನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲಾಯಿತು. ಕಲಾಪವನ್ನು ರದ್ದುಗೊಳಿಸಲು ಕೊರೋನ ಹೆಚ್ಚಳವೆ ಕಾರಣವಾಗಿದ್ದು, ಜು.1ರಂದು ಯಥಾರೀತಿ ಕೋರ್ಟ್ ಕಲಾಪಗಳು ನಡೆಯಲಿವೆ.
ಜೂ.29ರಂದು ಬೆಂಗಳೂರಿನಲ್ಲಿ ಸುಮಾರು 738 ಜನರಿಗೆ ಕೊರೋನ ಸೋಂಕು ದೃಢವಾಗಿತ್ತು. ಕೊರೋನ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ 4,052ಕ್ಕೆ ಏರಿಕೆಯಾಗಿದೆ.
Next Story