ಪೊಲೀಸರು ಲಂಚ ಪಡೆದ ಆರೋಪ ಪ್ರಕರಣ: ಎರಡು ಕಡೆ ಎಸಿಬಿ ದಾಳಿ
ಬೆಂಗಳೂರು, ಜು.4: ಲಾಕ್ಡೌನ್ ವೇಳೆ ಸಿಗರೇಟ್ ಹಾಗೂ ಮಾಸ್ಕ್ ವಿತರಕರಿಂದ ಎಸಿಪಿ ಸೇರಿದಂತೆ ಇನ್ನಿತರೆ ಪೊಲೀಸರು ಲಂಚ ಪಡೆದ ಆರೋಪದಡಿ ತನಿಖೆ ಮುಂದುವರೆಸಿರುವ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳು, ಎರಡು ಕಡೆ ದಾಳಿ ನಡೆಸಿ, ಶೋಧ ಕಾರ್ಯ ಮುಂದುವರೆಸಿದ್ದಾರೆ ಎಂದು ವರದಿಯಾಗಿದೆ.
ಎಸಿಪಿ ಪ್ರಭುಶಂಕರ್ ಬೇನಾಮಿ ಆಸ್ತಿ ಹೊಂದಿದ್ದಾರೆ ಎನ್ನಲಾದ ಮಾಹಿತಿ ಅಧಿಕಾರಿಗಳು ಪತ್ತೆ ಮಾಡಿದ್ದು, ಈ ಸಂಬಂಧ ಇಲ್ಲಿನ ಯಲಹಂಕದಲ್ಲಿರುವ ತೀರ್ಥಗೌಡ ಹಾಗೂ ಮುನಿಸ್ವಾಮಿ ಎಂಬುವವರ ಮನೆಯ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಸುಮಾರು 10 ಜನರ ವಿಶೇಷ ತಂಡ ಕಾರ್ಯಾಚರಣೆ ನಡೆಸಿ, ದಾಖಲೆಗಳನ್ನು ಪರಿಶೀಲನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
Next Story