'ಕೊರೋನ' ಖರೀದಿ ಸಾಮಗ್ರಿಗಳ ಲೆಕ್ಕ ಕೇಳಿದರೆ ಕಟೀಲು ಸುಳ್ಳಿನ ಪಿಟೀಲು ಬಾರಿಸುತ್ತಿದ್ದಾರೆ: ಈಶ್ವರ್ ಖಂಡ್ರೆ
ಬೆಂಗಳೂರು, ಜು.11: ಕೋವಿಡ್-19 ಆರೋಗ್ಯ ಸಾಮಗ್ರಿಗಳ ಖರೀದಿಯ ಲೆಕ್ಕಕೊಡಿ ಎಂದು ಕೇಳಿದರೆ, ಬಿಜೆಪಿಯ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಜನರ ಮುಂದೆ ಸುಳ್ಳಿನ ಪಿಟೀಲು ಬಾರಿಸುತ್ತಿದ್ದಾರೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ನಳೀನ್ ಕುಮಾರ್ ಕಟೀಲು ತಮ್ಮ ಕುಟಿಲ ಮಾತುಗಳಿಂದ ಜನರಿಗೆ ದಾರಿ ತಪ್ಪಿಸುತ್ತಿದ್ದಾರೆ. ಮೊದಲು ಕೋವಿಡ್-19 ಸಂಬಂಧ ರಾಜ್ಯ ಸರಕಾರ ಖರೀದಿ ಮಾಡಿರುವ ಸಾಮಗ್ರಿಗಳ ಲೆಕ್ಕಪತ್ರಗಳನ್ನು ಜನತೆಗೆ ಬಹಿರಂಗ ಪಡಿಸಲಿ ಎಂದು ಒತ್ತಾಯಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು, ನನ್ನ ಕ್ಷೇತ್ರದಲ್ಲಿ ಮನೆ ನಿರ್ಮಾಣದ ಅಕ್ರಮ ಸೃಷ್ಟಿಕರ್ತರು. ವಸತಿ ರಹಿತ ಬಡ ಜನರ ಹೊಟ್ಟೆ ಮೇಲೆ ಕಲ್ಲು ಹಾಕಿದವರು. ಈ ವಿಚಾರವಾಗಿ ನೇರಾ ನೇರಾ ಚರ್ಚೆಗೆ ನಾನು ಸಿದ್ಧನಿದ್ದೇನೆ. ಅದನ್ನು ಬಿಟ್ಟು ಜನರ ಮುಂದೆ ಸುಳ್ಳಿನ ಪಿಟೀಲು ಬಾರಿಸಲು ಹೋಗಬೇಡಿ ಎಂದು ಅವರು ಟೀಕಿಸಿದ್ದಾರೆ.
Next Story