ವಿಜಯಪುರ ಜಿಲ್ಲೆಯಲ್ಲಿ ಲಾಕ್ಡೌನ್ ಇಲ್ಲ: ಡಿಸಿಎಂ ಗೋವಿಂದ ಕಾರಜೋಳ ಸ್ಪಷ್ಟನೆ
ವಿಜಯಪುರ, ಜು.13: ವಿಜಯಪುರ ಜಿಲ್ಲೆಯನ್ನು ಯಾವುದೇ ಕಾರಣಕ್ಕೂ ಲಾಕ್ಡೌನ್ ಮಾಡಲ್ಲ ಎಂದು ಡಿಸಿಎಂ ಗೋವಿಂದ ಕಾರಜೋಳ ಸ್ಪಷ್ಟಪಡಿಸಿದ್ದಾರೆ.
ವಿಜಯಪುರ ಪೂರ್ತಿ ಜಿಲ್ಲೆ ಲಾಕ್ಡೌನ್ ಇಲ್ಲ. ಕೊರೋನ ಪ್ರಕರಣಗಳು ಹೆಚ್ಚಾದರೆ, ಹೆಚ್ಚಾದಂತಹ ಏರಿಯಾ ಅಥವಾ ವಾರ್ಡ್ ಅಷ್ಟೆ ಲಾಕ್ಡೌನ್ ಮಾಡಲಾಗುವುದು. ನಾವೆಲ್ಲರೂ ಕೊರೋನದೊಂದಿಗೆ ಬದುಕಬೇಕಿದೆ. ಸಂಜೆಗೆ ಸಿಎಂ ಸಭೆ ನಡೆಯಲಿದೆ, ನಾವೆಲ್ಲರೂ ಕಾನ್ಪರೆನ್ಸ್ ನಲ್ಲಿ ಭಾಗವಹಿಸಲಿದ್ದೇವೆ. ಡಿಸಿಗಳು ಕೊಟ್ಟ ವರದಿ ಆಧಾರದ ಮೇಲೆ ಸಿಎಂ ನಿರ್ಧರಿಸಲಿದ್ದಾರೆ ಎಂದು ಅವರು ತಿಳಿಸಿದರು.
Next Story