44 ವಲಯ ಅರಣ್ಯಾಧಿಕಾರಿಗಳ ವರ್ಗಾವಣೆ
ಬೆಂಗಳೂರು, ಜು. 16: ಆಡಳಿತ ಹಿತದೃಷ್ಟಿಯಿಂದ 44 ಮಂದಿ ವಲಯ ಅರಣ್ಯಾಧಿಕಾರಿಗಳನ್ನು ಅವರ ಹೆಸರಿನ ಮುಂದಿನ ಸೂಚಿತ ಸ್ಥಳಕ್ಕೆ ತಕ್ಷಣವೇ ನಿಯೋಜನೆಗೊಳ್ಳುವಂತೆ ವರ್ಗಾವಣೆ ಮಾಡಿ ರಾಜ್ಯ ಸರಕಾರ ಗುರುವಾರ ಆದೇಶ ಹೊರಡಿಸಿದೆ.
ಜ್ಞಾನಾನಂದ ಎಸ್.- ವಲಯ ಅರಣ್ಯಾಧಿಕಾರಿ, ಅರಣ್ಯ ತರಬೇತಿ ಶಾಲೆ ಚಕ್ರ ಶಿವಮೊಗ್ಗ, ಕೆ.ಎಚ್.ಮಂಜುನಾಥ- ಭದ್ರಾವತಿ ಪ್ರಾದೇಶಿಕ ವಿಭಾಗ ಮತ್ತು ವಲಯ, ಪ್ರಶಾಂತ ಮನಗೂಳಿ- ಸಾಮಾಜಿಕ ವಲಯ ಬೆಳಗಾವಿ, ಗಾಯತ್ರಿ ಲೋಕಣ್ಣವರ-ಕಾರ್ಯಯೋಜನೆ ಮತ್ತು ಭೂ ಮಾಪನ ಬೆಳಗಾವಿ ವೃತ್ತ, ರಾಜೀವ ಶ್ರೀಪತಿಗೌಡ ಬಿರಾದಾರ-ಮುದ್ದೇಬಿಹಾಳ ಪ್ರಾದೇಶಿಕ ಅರಣ್ಯ ವಲಯ ವಿಜಯಪುರ.
ರಾಜೇಶ್ ಬಳಿಗಾರ್-ಪ್ರಾದೇಶಿಕ ವಲಯ ಬಂಟ್ವಾಳ, ಎಚ್.ಪಿ.ರಾಘವೇಂದ್ರ- ಪ್ರಾದೇಶಿಕ ವಲಯ ಸುಳ್ಯ ತಾಲೂಕು ಮಂಗಳೂರು, ಮಂಜುನಾಥ ಎನ್.- ಪಂಜ ಪ್ರಾದೇಶಿಕ ವಲಯ ಮಂಗಳೂರು ಪ್ರಾದೇಶಿಕ ವಿಭಾಗ, ಬಿ.ಆರ್.ದಫೇದಾರ್- ಮಂಗಳೂರು ಸಾಮಾಜಿಕ ಅರಣ್ಯ ವಲಯ ದಕ್ಷಿಣ ಕನ್ನಡ ಇವರು ಸೇರಿದಂತೆ ಒಟ್ಟು 44 ಮಂದಿ ವಲಯ ಅರಣ್ಯಾಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.
ಮೇಲಿನ ವರ್ಗಾವಣೆಗಳ ಅನುಮೋದನೆಯು ಯಾವುದೇ ಹುದ್ದೆಗೆ/ಅಧಿಕಾರಿಯ ವರ್ಗಾವಣೆ ಸಂಬಂಧ ನ್ಯಾಯ ಮಂಡಳಿ/ನ್ಯಾಯಾಲಯದ ತಡೆಯಾಜ್ಞೆ ಜಾರಿಯಲ್ಲಿದ್ದಲ್ಲಿ ಅಂತಹ ಹುದ್ದೆಗೆ ಅಧಿಕಾರಿಗೆ ವರ್ಗಾವಣೆಯನ್ನು ಜಾರಿಗೊಳಿಸಬಾರದು ಎಂಬ ಷರತ್ತಿಗೆ ಒಳಪಟ್ಟಿರುತ್ತದೆ ಎಂದು ಅರಣ್ಯ ಇಲಾಖೆ ಅಧೀನ ಕಾರ್ಯದರ್ಶಿ ಪಿ.ವಿ.ಶ್ರೀನಿವಾಸನ್ ಆದೇಶ ಹೊರಡಿಸಿದ್ದಾರೆ.