ತಲಕಾವೇರಿ ದುರಂತ: ಒಂದು ಮೃತದೇಹ ಪತ್ತೆ
ತಲಕಾವೇರಿಯ ಬ್ರಹ್ಮಗಿರಿ ಬೆಟ್ಟ ಕುಸಿತ ಸಂಭವಿಸಿರುವ ಸ್ಥಳ: ಒಳಚಿತ್ರದಲ್ಲಿ ಆನಂದ ತೀರ್ಥ ಸ್ವಾಮೀಜಿ
ಮಡಿಕೇರಿ, ಆ.8: ತಲಕಾವೇರಿಯ ಬ್ರಹ್ಮಗಿರಿ ಬೆಟ್ಟ ಕುಸಿತ ಪ್ರದೇಶದಲ್ಲಿ ಭೂ ಸಮಾಧಿಯಾಗಿರುವ ಐವರ ಪೈಕಿ ಓರ್ವರ ಮೃತದೇಹ ಶನಿವಾರ ಪತ್ತೆಯಾಗಿದೆ.
ಮಳೆಯ ನಡುವೆಯೇ ಶೋಧ ಕಾರ್ಯ ಮುಂದುವರಿಸಿರುವ ಎನ್ಡಿಆರ್ಎಫ್ ತಂಡ ಒಂದು ಮೃತದೇಹವನ್ನು ಪತ್ತೆಹಚ್ಚಿದೆ. ಮೃತರನ್ನು ತಲಕಾವೇರಿ ಕ್ಷೇತ್ರದ ಪ್ರಧಾನ ಅರ್ಚಕ ನಾರಾಯಣ ಆಚಾರ್ ಅವರ ಸೋದರ ಆನಂದ ತೀರ್ಥ ಸ್ವಾಮೀಜಿ ಎಂದು ಗುರುತಿಸಲಾಗಿದೆ. ಇತರ ನಾಲ್ವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
Next Story