ರಾಜ್ಯದಲ್ಲಿಂದು 7 ಸಾವಿರಕ್ಕೂ ಅಧಿಕ ಮಂದಿಗೆ ಕೋವಿಡ್ ದೃಢ: 5,006 ಮಂದಿ ಆಸ್ಪತ್ರೆಯಿಂದ ಬಿಡುಗಡೆ
ಕೊರೋನ ಸಾವಿನ ಸಂಖ್ಯೆ 3091ಕ್ಕೆ ಏರಿಕೆ
ಬೆಂಗಳೂರು, ಆ.8: ರಾಜ್ಯದಲ್ಲಿ ಕೆಲದಿನಗಳಿಂದ ಮಹಾಮಾರಿ ಕೊರೋನ ಸೋಂಕು ಆತಂಕಕಾರಿ ಸ್ಥಿತಿಯಲ್ಲಿ ಏರುತ್ತಿದೆ. ದೈನಂದಿನ ಪ್ರಕರಣಗಳಲ್ಲಿ ಮತ್ತಷ್ಟು ಹೆಚ್ಚಳವಾಗಿದ್ದು, ಶುಕ್ರವಾರ ಸಂಜೆಯಿಂದ ಶನಿವಾರ ಸಂಜೆವರೆಗೆ ಮತ್ತೆ 7,178 ಮಂದಿಗೆ ಕೊರೋನ ವೈರಸ್ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಒಟ್ಟು ಸಂಖ್ಯೆ 1,72,102 ಕ್ಕೆ ಏರಿಕೆಯಾಗಿದೆ.
24 ಗಂಟೆಗಳಲ್ಲಿ 93 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 3091 ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಬೆಂಗಳೂರು ನಗರ ಜಿಲ್ಲೆಯಲ್ಲಿ ಒಂದೇ ದಿನ 18 ಮಂದಿ ಕೊರೋನ ಸೋಂಕಿಗೆ ಬಲಿಯಾಗಿದ್ದಾರೆ. ಉಳಿದಂತೆ ಮೈಸೂರು 10, ಬಳ್ಳಾರಿ 9, ಕಲಬುರಗಿ 7, ಧಾರವಾಡ 6, ದಕ್ಷಿಣ ಕನ್ನಡ 6, ಹಾಸನ 6, ಉಡುಪಿ 5, ಚಾಮರಾಜನಗರ 3, ಯಾದಗಿರಿ 2, ರಾಯಚೂರು 2, ತುಮಕೂರು 2, ದಾವಣಗೆರೆ 2, ಹಾವೇರಿ 2, ಚಿಕ್ಕಮಗಳೂರು 2, ರಾಮನಗರ 2, ಬೀದರ್ ನಲ್ಲಿ 2 ಸಾವು ಸಂಭವಿಸಿದೆ.
ಸೋಂಕು ಖಚಿತಗೊಂಡ ಪ್ರಕರಣಗಳ ಪೈಕಿ ಬೆಂಗಳೂರು ನಗರ 2,665, ಬಳ್ಳಾರಿ 607, ಉಡುಪಿ 313, ಬೆಳಗಾವಿ 302, ರಾಯಚೂರು 295, ಕಲಬುರಗಿ 261, ಧಾರವಾಡ 261, ಯಾದಗಿರಿ 200, ದಕ್ಷಿಣ ಕನ್ನಡ 194, ತುಮಕೂರು 177, ಕೊಪ್ಪಳ 163, ಬಾಗಲಕೋಟೆ 149, ವಿಜಯಪುರ 143, ಮೈಸೂರು 138, ಹಾಸನ 133, ದಾವಣಗೆರೆ 132, ಉತ್ತರ ಕನ್ನಡ 117, ಮಂಡ್ಯ 101, ಹಾವೇರಿ 95, ಗದಗ 94, ರಾಮನಗರ 93, ಚಿಕ್ಕಮಗಳೂರು 89, ಶಿವಮೊಗ್ಗ 73, ಬೆಂಗಳೂರು ಗ್ರಾಮಾಂತರ 66, ಚಿಕ್ಕಬಳ್ಳಾಪುರ 66, ಚಿತ್ರದುರ್ಗ 63, ಚಾಮರಾಜನಗರ 62, ಕೋಲಾರ 57, ಬೀದರ್ 47, ಕೊಡಗು ಜಿಲ್ಲೆಯಲ್ಲಿ 22 ಪ್ರಕರಣ ಪಾಸಿಟಿವ್ ಬಂದಿದೆ.
ಒಟ್ಟಾರೆ ರಾಜ್ಯದಲ್ಲಿ 1,72,102 ಕೊರೋನ ಸೋಂಕಿತರ ಪೈಕಿ 89,238 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಇದರಲ್ಲಿ ಇಂದು ಒಂದೇ ದಿನ 5,006 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದಂತೆ ಇದುವರೆಗೆ 3,091 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು, 79,765 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.