ಮಡಿಕೇರಿ: ಎಸೆಸೆಲ್ಸಿಯಲ್ಲಿ ಪುತ್ರ ಅನುತ್ತೀರ್ಣ; ಮನನೊಂದು ನೇಣಿಗೆ ಶರಣಾದ ತಂದೆ
ಮಡಿಕೇರಿ, ಆ. 25: ಎಸೆಸೆಲ್ಸಿ ಪರೀಕ್ಷೆಯಲ್ಲಿ ಪುತ್ರ ಅನುತ್ತೀರ್ಣನಾದನೆಂದು ಮನನೊಂದ ವ್ಯಕ್ತಿಯೊಬ್ಬರು ನೇಣಿಗೆ ಶರಣಾದ ಘಟನೆ ಚೆಟ್ಟಳ್ಳಿಯಲ್ಲಿ ನಡೆದಿದೆ.
ಲೈನ್ ಮನೆಯಲ್ಲಿ ವಾಸವಿದ್ದ ಕಾರ್ಮಿಕ ರಘು(39) ಮೃತ ವ್ಯಕ್ತಿಯಾಗಿದ್ದು, ಚೆಟ್ಟಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರಘು ಅವರ ಪತ್ನಿ ಮಂಜುಳಾ ನೀಡಿರುವ ದೂರಿನ ಪ್ರಕಾರ, ಪುತ್ರ ಪ್ರಶಾಂತ್ ಹತ್ತನೇ ತರಗತಿ ಪರೀಕ್ಷೆಯಲ್ಲಿ ಅನುತ್ತೀರ್ಣನಾದ ಕಾರಣ ರಘು ನೊಂದುಕೊಂದು ನಿತ್ಯ ಮದ್ಯ ಸೇವಿಸುತ್ತಿದ್ದರು. ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ.
Next Story