ಗುಂಪು ಹಲ್ಲೆ, ನಿಂದನೆಯಿಂದ ಮನನೊಂದು ಕಾರ್ಮಿಕ ಆತ್ಮಹತ್ಯೆ
ಮಂಡ್ಯ, ಸೆ.11: ನಾಲ್ವರ ಗುಂಪು ಹಲ್ಲೆ, ನಿಂದನೆಯಿಂದ ಮನನೊಂದ ಗಾರೆ ಕೆಲಸ ಮಾಡುವ ಕಟ್ಟಡ ಕಾರ್ಮಿಕರೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ.
ಕೆ.ಆರ್.ಪೇಟೆ ತಾಲೂಕು ಹೊಸಮಾವಿನ ಕೆರೆ ಗ್ರಾಮದಲ್ಲಿ ಘಟನೆ ನಡೆದಿದ್ದು, ಗ್ರಾಮದ ಗಣೇಶ(55) ಆತ್ಮಹತ್ಯೆ ಮಾಡಿಕೊಂಡವರು.
ಆಲಂಬಾಡಿ ಗ್ರಾಮದ ಶಿವಲಿಂಗಯ್ಯ, ಹರೀಶ, ಮೋಹನ ಹಾಗೂ ಮಾವಿನಕೆರೆ ಗ್ರಾಮದ ವೆಂಕಟಶೆಟ್ಟಿ ಅವರು ಗಣೇಶ ಅವರ ಮೇಲೆ ಹಲ್ಲೆ ನಡೆಸಿ, ಅವಮಾನ ಮಾಡಿದ್ದರಿಂದ ತನ್ನ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಕಾರ್ಮಿಕನ ಪುತ್ರ ಚೇತನ್ ಕುಮಾರ್ ಕೆ.ಆರ್.ಪೇಟೆ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.
Next Story