ಪರಪ್ಪನ ಅಗ್ರಹಾರ ಜೈಲಿನಿಂದ ಕೈದಿ ಡೇವಿಡ್ ಎಸ್ಕೇಪ್
ಬೆಂಗಳೂರು,ಆ.31: ಇಲ್ಲಿನ ಪರಪ್ಪನ ಅಗ್ರಹಾರ ಜೈಲಿನಿಂದ ಕೈದಿ ಡೇವಿಡ್ ಎಂಬಾತ ಇಂದು ಬೆಳಗ್ಗೆ ಪರಾರಿಯಾಗಿದ್ದಾನೆ.
ಮುಂಜಾನೆ 4 ಗಂಟೆ ಸಮಯದಲ್ಲಿ ಜೈಲಿನಿಂದ ತಪ್ಪಿಸಿಕೊಂಡ ಡೇವಿಡ್ ತರಕಾರಿ ವಾಹನದಲ್ಲಿ ಪರಾರಿಯಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಹೆಚ್ಚಿನ ಭದ್ರತೆ ಹೊಂದಿರುವ ಪರಪ್ಪನ ಅಗ್ರಹಾರದಿಂದ 2 ವರ್ಷಗಳ ಹಿಂದೆ ಸೈಕೋಪಾಥ್ ಜೈಶಂಕರ್ ಕಾಂಪೌಡ್ ಜಿಗಿದು ಪರಾರಿಯಾಗಿದ್ದನು. ಬಳಕ ಅವನನ್ನು ಬಂಧಿಸಲಾಗಿತ್ತು. ಆ ಬಳಿಕ ಇದು ಎರಡನೇ ಪ್ರಕರಣವಾಗಿದೆ.
Next Story