ರುದ್ರೇಶ್ ಕೊಲೆಗೂ ಪಿಎಫ್ಐಗೂ ಸಂಬಂಧ ಇಲ್ಲ: ಯಾಸೀರ್ ಹಸನ್
ಬೆಂಗಳೂರು, ನ.3:ಆರ್ಎಸ್ಎಸ್ ಕಾರ್ಯಕರ್ತ ರುದ್ರೇಶ್ ಕೊಲೆಗೂ ಪ್ರಕರಣದ ಆರೋಪಿಗಳಿಗೂ ಪಿಎಫ್ಐಗೂ ಸಂಬಂಧವಿಲ್ಲ ರಾಜಕೀಯ ಒತ್ತಡದಿಂದ ಪಿಎಫ್ಐ ಬೆಂಗಳೂರು ಘಟಕದ ಶರೀಫ್ ಅವರನ್ನು ಬಂಧಿಸಲಾಗಿದೆ ಎಂದು ಪಿಎಫ್ಐ ಪ್ರಧಾನ ಕಾರ್ಯದರ್ಶಿ ಯಾಸೀರ್ ಹಸನ್ ಹೇಳಿದ್ದಾರೆ.
ನಗರದ ಪ್ರೆಸ್ಕ್ಲಬ್ನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿ ಹಿಂದೆ ದಕ್ಷಿಣ ಕನ್ನಡದಲ್ಲಿ ಹರೀಶ್ ಪೂಜಾರಿ ಹತ್ಯಾ ಪ್ರಕರಣದಲ್ಲೂ ಪಿಎಫ್ಐ ಮೇಲೆ ಆರೋಪ ಕೇಳಿ ಬಂದಿತ್ತು ಎಂದು ಹೇಳಿದ್ದಾರೆ. ನಮ್ಮ ಸಂಘಟನೆಯವರು ಇಂತಹ ಕೃತ್ಯದಲ್ಲಿ ಭಾಗಿಯಾಗಿಲ್ಲ. ಒಂದು ವೇಳೆ ಪಿಎಫ್ಐ ಸದಸ್ಯರು ಭಾಗಿಯಾಗಿದ್ದರೆ ಅವರಿಗೆ ಶಿಕ್ಷೆಯಾಗಲಿ ಎಂದು ಹೇಳಿದರು.
ರುದ್ರೇಶ್ ಕೊಲೆ ಸ್ಥಳೀಯ ವಿಚಾರವಾಗಿ ನಡೆದಿದೆ. ಶರೀಫ್ ಬಂಧನ ಖಂಡನಾರ್ಹವಾಗಿದೆ ಎಂದು ಯಾಸೀರ್ ಹಸನ್ ಆರೋಪಿಸಿದರು.
Next Story