ನಿಧನ
ಕೆ.ಎಸ್. ಮಂಜೇಗೌಡ
ಮೂಡಿಗೆರೆ, ಡಿ.3: ತಾಲೂಕಿನ ಕಣಚೂರು ಗ್ರಾಮದ ಹಿರಿಯ ಕಾಫಿ ಬೆಳೆಗಾರ ಕೆ.ಎಸ್.ಮಂಜೇಗೌಡ(76) ಎಂಬವರು ಅನಾರೋಗ್ಯದಿಂದ ಶನಿವಾರ ನಿಧನರಾಗಿದ್ದಾರೆ.
ಈ ಭಾಗದಲ್ಲಿ ಜನಾನುರಾಗಿದ್ದ ಅವರು, ಪತ್ನಿ ಶಕುಂತಳಮ್ಮ, ಪುತ್ರರಾದ ಪ್ರದೀಪ, ಪ್ರಸನ್ನ, ಪ್ರಕಾಶ್ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಇವರ ನಿಧನಕ್ಕೆ ಶಾಸಕ ಬಿ.ಬಿ. ನಿಂಗಯ್ಯ, ವಿಧಾನ ಪರಿಷತ್ ಸದಸ್ಯರಾದ ಡಾ.ಮೋಟಮ್ಮ, ಎಂ.ಕೆ. ಪ್ರಾಣೇಶ್, ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ, ಬಿಜೆಪಿ ತಾಲೂಕು ಅಧ್ಯಕ್ಷ ದುಂಡುಗ ಪ್ರಮೋದ್, ತಾಲೂಕು ವಕ್ತಾರೆ ನಯನಾ ತಳವಾರ, ಪ್ರಧಾನ ಕಾರ್ಯದರ್ಶಿ ವಿನೋದ್ ಕಣಚೂರು ಸಂತಾಪ ವ್ಯಕ್ತಪಡಿಸಿದ್ದಾರೆ.
Next Story