ವ್ಯಕ್ತಿಗೆ ಬೈಕ್ ಢಿಕ್ಕಿ: ಆರೋಪಿಗೆ ದಂಡ, ಜೈಲು ಶಿಕ್ಷೆ
ಸಾಗರ, ಡಿ.14: ಬೈಕ್ ಢಿಕ್ಕಿ ಹೊಡೆಸಿ ವ್ಯಕ್ತಿಯೋರ್ವನ ಸಾವಿಗೆ ಕಾರಣವಾಗಿದ್ದ ಚಾಲಕನಿಗೆ ಇಲ್ಲಿನ ಹೆಚ್ಚುವರಿ ಜೆಎಂಎಫ್ ನ್ಯಾಯಾಲಯ ಶಿಕ್ಷೆ ವಿಧಿಸಿ ಮಂಗಳವಾರ ಆದೇಶ ಹೊರಡಿಸಿದೆ. ತಾಲೂಕಿನ ಆನಂದಪುರಂನ ಮುಖ್ಯರಸ್ತೆಯಲ್ಲಿ ಯಡೇಹಳ್ಳಿ ನಿವಾಸಿ ನವೀನ್ ಎಂಬವರು ತಮ್ಮ ಹೀರೋಹೊಂಡಾ ಬೈಕನ್ನು ಅತಿವೇಗದಿಂದ ಚಲಿಸಿ ರಾಮು ಯಾನೆ ರಾಮಪ್ಪಎಂಬವರಿಗೆ ಢಿಕ್ಕಿ ಹೊಡೆಸಿದ್ದರು ಎನ್ನಲಾಗಿದೆ.
ಅಪಘಾತ ಸಂದರ್ಭದಲ್ಲಿ ರಾಮು ಅವರು ಮರಣವನ್ನಪ್ಪಿದ್ದರು. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಜೆಎಂಎಫ್ ನ್ಯಾಯಾಲಯದ ನ್ಯಾಯಾಧೀಶ ಪುಟ್ಟರಾಜು ಅವರು ಆರೋಪಿ ನವೀನ್ಗೆ ಒಂದೂವರೆ ವರ್ಷ ಜೈಲು ಹಾಗೂ 6ಸಾವಿರ ರೂ. ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ. ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕ ಬಸವರಾಜ್ ಎಂ. ವಾದ ಮಂಡಿಸಿದ್ದರು.
Next Story