ವಿದ್ಯುತ್ ತಂತಿಗೆ ಸಿಲುಕಿ ಚಿರತೆ ಸಾವು
ತರೀಕೆರೆ, ಡಿ 24 : ಲಿಂಗದಹಳ್ಳಿ ಹೋಬಳಿಯ ತಣಿಗೆಬೈಲು ವ್ಯಾಪ್ತಿಯ ಮಂಚೆತವರು ಗ್ರಾಮದ ಸರ್ವೇ ನಂ.1ರಲ್ಲಿ ನಾಗೇಂದ್ರನಾಯ್ಕ ಎಂಬವರ ಬಾಳೆ ತೋಟಕ್ಕೆ ಅಳವಡಿಸಿದ್ದ ವಿದ್ಯುತ್ ತಂತಿಯ ಉರುಳಿಗೆ ಸಿಲುಕಿ 3ವರ್ಷದ ಗಂಡು ಚಿರತೆಯು ಮೃತಪಟ್ಟಿದೆ.
ಮೃತಪಟ್ಟ ಜಾಗಕ್ಕೆ ತರೀಕೆರೆ ಅರಣ್ಯ ಸಹಾಯಕ ಸಂರಕ್ಷಣಾಧಿಕಾರಿ ಶ್ರೀನಿವಾಸ್, ಲಿಂಗದಹಳ್ಳಿ ಉಪ ವಲಯ ಅರಣ್ಯಾಧಿಕಾರಿ ಟಿ.ಕೆ. ಶ್ರೀನಿವಾಸ್ ಹಾಗೂ ಸಿಬ್ಬಂದಿ ಭೇಟಿ ನೀಡಿದ್ದು, ಮರಣೋತ್ತರ ಪರೀಕ್ಷೆ ನಡೆಸಿ ದೂರು ದಾಖಲಿಸಲಾಗಿದೆ. ಈ ಸಂಬಂಧ ತನಿಖೆ ನಡೆಸಲಾಗುತ್ತಿದೆ.
Next Story