ಗುಂಡಿಗೆ ಬಿದ್ದು ಯುವಕ ಸಾವು
ತೀರ್ಥಹಳ್ಳಿ,ಜ.18: ತೀರ್ಥಹಳ್ಳಿ ಸಮೀಪದ ತುಡ್ಕಿಯಲ್ಲಿ ನಿರ್ಮಾಣ ಹಂತದ ಶೌಚಾಲಯದ ಗುಂಡಿಗೆ ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ಸೋಮವಾರದಂದು ವರದಿಯಾಗಿದೆ.
ಮೃತ ವ್ಯಕ್ತಿ ತುಡ್ಕಿ ಗೋಪಾಲನಾಯ್ಕರ ಪುತ್ರ ಶ್ರೀಧರ್ (30) ಎಂದು ಗುರುತಿಸಲಾಗಿದೆ. ರವಿವಾರ ಸಂಜೆ ನಿರ್ಮಾಣ ಹಂತದಲ್ಲಿರುವ ಶೌಚಾಲಯದ ಗುಂಡಿಗೆ ಕಾಲುಜಾರಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಸಂಬಂಧ ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story