ಚಿಕ್ಕಮಗಳೂರಿನಾದ್ಯಂತ 4.50 ಲಕ್ಷ ಎಕರೆಗೂ ಮಿಕ್ಕಿ ಭೂ ಒತ್ತುವರಿ: ಜಸ್ಟೀಸ್ ನಾರಾಯಣ
ಚಿಕ್ಕಮಗಳೂರು, ಜ.21: ಜಿಲ್ಲೆಯಲ್ಲಿ 4.50 ಲಕ್ಷ ಎಕರೆಗಿಂತಲೂ ಹೆಚ್ಚು ಭೂ ಪ್ರದೇಶವನ್ನು ಕಾನೂನು ಬಾಹಿರವಾಗಿ ಒತ್ತುವರಿ ಮಾಡಲಾಗಿದೆ ಎಂದು ಸುಬ್ರಹ್ಮಣ್ಯಂ ಸ್ವಾಮಿ ವರದಿಯಲ್ಲಿ ನೀಡಲಾಗಿದೆ. ಭೂಮಿ ಒತ್ತುವರಿ ಮಾಡುವುದು ಸೇರಿದಂತೆ ಕಾನೂನು ಬಾಹಿರವಾಗಿ ಸರಕಾರಿ ಭೂಮಿಯನ್ನು ಕಬಳಿಸುವುದು ದಂಡನೀಯ ಅಪರಾಧ ಎಂದು ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾರಾಯಣ ತಿಳಿಸಿದರು.
ಅವರು ನಗರದ ಪ್ರವಾಸಿ ಮಂದಿರದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಸರಕಾರವು ಹಿಂದೂ ಧಾರ್ಮಿಕ ಸಂಸ್ಥೆ, ವಕ್ಫ್, ಧರ್ಮದಾಯಿ ದತ್ತಿಗಳು, ಸ್ಥಳೀಯ ಪ್ರಾಧಿಕಾರಕ್ಕೆ ಸೇರಿದ ಭೂಮಿಯನ್ನು ಕಾನೂನು ಬಾಹಿರವಾಗಿ ಒತ್ತುವರಿ ಮಾಡಿಕೊಂಡಿರುವುದು ಅಪರಾಧವಾಗಿದೆ. ಕೆಲವರು ಸಾರ್ವಜನಿಕ ಭೂಮಿಯನ್ನು ಅಕ್ರಮವಾಗಿ ಕಬಳಿಸಿಕೊಂಡು ನಕಲು ಗೃಹ ನಿರ್ಮಾಣದ ಸಂಸ್ಥೆಗಳನ್ನು ಮಾಡಿಕೊಂಡು ಸಾರ್ವಜನಿಕರಿಗೆ ಮೋಸದಿಂದ ಸೈಟ್ಗಳನ್ನು ಮಾರಾಟ ಮಾಡುತ್ತಿರುವುದು ಕಂಡು ಬರುತ್ತಿದೆ ಎಂದು ಹೇಳಿದರು.
ಸಾರ್ವಜನಿಕರ ಸುವ್ಯವಸ್ಥೆಯ ಅತಿಕೂಲ ಪರಿಣಾಮವನ್ನು ತಡೆಯಲು ಸಾಧ್ಯವಾಗುತ್ತದೆ. ಭೂಕಬಳಿಕೆ ಸಾಬೀತಾದ ಅಪರಾಧಕ್ಕೆ ಒಂದು ವರ್ಷದಿಂದ ಮೂರು ವರ್ಷಗಳ ಜೈಲು ಶಿಕ್ಷೆ ಹಾಗೂ 25 ಸಾವಿರ ರೂ. ವರೆಗೆ ದಂಡ ವಿಧಿಸಲಾಗುವುದು ಎಂದರು.
ಒತ್ತುವರಿಯು ಕಂಪೆನಿ ವತಿಯಿಂದ ಆಗಿದ್ದರೆ, ಆ ಸಮಯದಲ್ಲಿ ಕಂಪೆನಿಯಲ್ಲಿದ್ದ ಪ್ರತಿಯೊಬ್ಬ ಸದಸ್ಯನೂ ತಪ್ಪಿತಸ್ಥನಾಗುತ್ತಾರೆ. ಸರಕಾರವು ಭೂಕಬಳಿಕೆ ಎಂದು ಅಪಾದಿಸಲಾದ ವ್ಯಕ್ತಿಯನ್ನು ಶೀಘ್ರ ವಿಚಾರಣೆ ನಡೆಸಲು ಉಚ್ಚ ನ್ಯಾಯಾಲಯದ ನ್ಯಾಯಾ ಧೀಶರನ್ನೊಳಗೊಂಡ ವಿಶೇಷ ನ್ಯಾಯಾಲಯವನ್ನು ರಚಿಸಲಾಗಿದ್ದು, ಈಗಾಗಲೇ ಬೆಂಗಳೂರು ಕಂದಾಯ ಭವನದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ನುಡಿದರು.
ಈ ಕಾನೂನು ವ್ಯಾಪ್ತಿಯಲ್ಲಿ ಸರಕಾರದ ಜಮೀನನ್ನು ಒತ್ತುವರಿ ಮಾಡಲಾಗಿದೆ ಎಂದು ಆಪಾದನೆ ಬಂದಲ್ಲಿ ಅಪರಾಧಿಯೇ ಭೂಕಬಳಿಕೆ ಮಾಡಿಲ್ಲ ಎಂದು ರುಜುವಾತು ಮಾಡುವ ಭಾರ ಹೊಂದಿರುತ್ತಾನೆ. ಸರಕಾರಿ ಭೂಮಿಯನ್ನು ಕಾನೂನು ಬದ್ಧ ಗೇಣಿಯ ಹೊರತಾಗಿ ಒತ್ತುವರಿ ಮಾಡಿದ್ದರೆ, ಸಾರ್ವಜನಿಕರು, ಸಂಘ-ಸಂ್ಥೆಗಳ ಪದಾಧಿಕಾರಿಗಳು, ಸರಕಾರಿ ಅಧಿಕಾರಿಗಳು ವಿಶೇಷ ನ್ಯಾಯಾಲಯಕ್ಕೆ ದೂರು ಸಲ್ಲಿಸಬಹುದಾಗಿದೆ. ಕೆಲವೊಮ್ಮೆ ಸ್ವಯಂ ಪ್ರೇರಿತರಾಗಿಯೂ ದೂರುಗಳನ್ನು ದಾಖಲಿಸಲಾಗುವುದು ಎಂದು ನುಡಿದರು. ಜಿಲ್ಲಾಧಿಕಾರಿ ಸತ್ಯವತಿ ಮಾತನಾಡಿ, ಜಿಲ್ಲೆಯಲ್ಲಿ 10 ಎಕರೆ ಪ್ರದೇಶಕ್ಕಿಂತ ಹೆಚ್ಚು ಭೂಮಿಯನ್ನು ಒತ್ತುವರಿ ಮಾಡಿದ ಬಗ್ಗೆ 580 ಪ್ರಕರಣಗಳನ್ನು ಗುರುತಿಸಲಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ಕೆಲವು ಕಾನೂನುಬಾಹಿರ ಒತ್ತುವರಿ ಪಡಿಸಿರುವುದನ್ನು ಖುಲಾಸೆಪಡಿಸಲಾಗಿದ್ದು, ಅವುಗಳನ್ನು ಮರುಸ್ವಾಧೀನ ಪಡಿಸಿಕೊಂಡ ಬಗ್ಗೆ ಬೋರ್ಡ್ಗಳನ್ನು ಹಾಕಲಾಗಿದೆ. ಈ ಭೂಮಿ ಯಲ್ಲಿ ಬೆಳೆದ ಕಾಫಿಗಿಡಗಳನ್ನು ತೆರವುಗೊಳಿಸಲು ಹಾಗೂ ಸುತ್ತ ಕಂದಕ ನಿವಿ ರ್ುಸಲು ಅನುದಾನ ಕೊರತೆಯಿದೆ ಎಂದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಎಲ್. ವೈಶಾಲಿ, ಉಪವಿಭಾಗಾಧಿಕಾರಿಗಳಾದ ಸಂಗಪ್ಪ, ಸರೋಜಾ, ಡಿಎಫ್ಒ ಚಂದ್ರಪ್ಪ, ತಹಶೀಲ್ದಾರ್ ಹಾಗೂ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.