ಚಿರತೆ ದಾಳಿ: ಎರಡು ಕುರಿಗಳ ಬಲಿ
ಚಿಕ್ಕಮಗಳೂರು, ಜ.21: ಜಿಲ್ಲೆಯ ದಾಸರಹಳ್ಳಿಯ ಸಮೀಪ ಶುಕ್ರವಾರ ಬೆಳಗ್ಗೆ ಚಿರತೆ ಕಾಣಿಸಿಕೊಳ್ಳುವ ಮೂಲಕ ಸ್ಥಳೀಯರ ಭೀತಿಗೆ ಕಾರಣವಾಗಿದೆ. ಕಳೆದ ಹಲವು ದಿನಗಳಿಂದ ಈ ಭಾಗದಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿದೆ ಎನ್ನುವುದು ಸ್ಥಳೀಯರ ಆತಂಕವಾಗಿದೆ. ಶನಿವಾರ ಬೆಳಗ್ಗೆ ಎರಡು ಕುರಿಗಳನ್ನು ಹೊತ್ತೊಯ್ದಿರುವ ಚಿರತೆ ಎರಡೂ ಕುರಿಗಳನ್ನು ಕೊಂದು ಹಾಕಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೆೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Next Story